Sunday, April 19, 2009

ಅಮ್ಮ ಎಲ್ಲಿದ್ದಾಳೆ ? (ಸಣ್ಣ ಕಥೆ)

ನನಗೆ ಅಮ್ಮನೆಂದರೆ ಹೇಸಿಗೆ. ಥೂ... ಹಾಗೆಲ್ಲ ಹೇಳಬಾರದು. ನನಗೆ ಜನ್ಮ ನೀಡಿದ ಅಮ್ಮನ ಕುರಿತು ಹಾಗೆಲ್ಲ ಹೇಳಬಾರದು ಎಂದೆನಿಸುತ್ತದೆ ನನಗೆ. ಪ್ರಪಂಚವನ್ನು ದಿಟ್ಟಿಸಿ ನೋಡುವುದ ನಾನು ಕಲಿಯುವುದರೊಳಗೆ ನನ್ನ ಬೀದಿಪಾಲು ಮಾಡಿ ಬದುಕಿಗೆ ಹೆದರಿ ಅಥವಾ ನನ್ನ ಬದುಕು ಕಟ್ಟಿಕೊಡಲು ಸಾಧ್ಯವಾಗದೇ ಕೈಚೆಲ್ಲಿ ಎಲ್ಲೋ ಹೋದ ನನ್ನಮ್ಮನ ನೆನೆದರೆ ನನಗೆ ಸಿಟ್ಟು ಉಕ್ಕಿ ಬರುತ್ತದೆ. ಆದರೂ ಅಮ್ಮನನ್ನು ಇಷ್ಟೆಲ್ಲಾ ದ್ವೇಷಿಸುವ ನಾನು ಪದೇಪದೇ ಅವಳನ್ನು ಬಯಸುವುದೇಕೆ? ನನ್ನಮ್ಮ ಮತ್ತೆ ಸಿಗಲಿ ಎಂದೆನಿಸುವುದೇಕೋ? ನನ್ನಮ್ಮ ಇದ್ದಾಳೋ ಇಲ್ಲವೋ ?

ತೆಂಗಿನ ಮಡ್ಲು ಮೇಲೆ ಹೊದ್ದಿಸಿ ಅದಕ್ಕೊಂದು ತಗಡಿನ ಬಾಗಿಲಿರುವ ಸಣ್ಣ ಗುಡಿಸಲು ನನ್ನ ಮನೆ. ಮನೆ ಎದುರು ವಿಶಾಲ ಸಮುದ್ರ. ಸಮುದ್ರ ನೋಡಿದಾಗಲೆಲ್ಲ ನನಗೆ ಎಷ್ಟೋ ಸೂಕ್ಷ್ಮಗಳನ್ನು ಬಚ್ಚಿಟ್ಟುಕೊಂಡು ಯಾವೊಂದು ಪ್ರಶ್ನೆಗೂ ಉತ್ತರ ಕೊಡದೇ ಗಂಭೀರವಾಗಿ ನನ್ನ ಎದೆಗವಚಿ ಮಲಗುತ್ತಿದ್ದ ನನ್ನಮ್ಮ ನೆನಪಾಗುತ್ತಾಳೆ. ವಿಶಾಲ ಸಮುದ್ರದೆದುರಿನ ಪುಟ್ಟ ಗುಡಿಸಲು ಯಾವೊತ್ತು ಸಮುದ್ರದ ಆಗಾಧತೆಯ ಕುರಿತು ಚಿಂತಿಸಲಿಲ್ಲ. ಹೆಚ್ಚು ಸಮಯ ನನಗಿಂತ ನನ್ನಮ್ಮ ಮನೆಯಲ್ಲಿರುತ್ತಿದ್ದಳು, ನಾನೋ ಸಮುದ್ರದೆದುರು ಮರಳುಗೂಡು ಕಟ್ಟುವಾಟದಲ್ಲಿ ಯಾವತ್ತೂ ಮುಳುಗಿರುತ್ತಿದ್ದೆ. ನನ್ನಪ್ಪನ ಪ್ರೀತಿಯ ಆಡ್ಕೋ ಹೋಗ್' ಅನ್ನೋ ಮಾತಿಗೆ ನಾನು ನಿಷ್ಟನಾಗಿರುತ್ತಿದ್ದೆ.

ಅಪ್ಪ ಆಡ್ಕೋ ಹೋಗ್' ಅಂದ ನಂತರ ಮನೆಗೆ ಹೋಗೋದಕ್ಕೆ ಏನೋ ಒಂದು ರೀತಿಯ ಭಯವಾಗುತ್ತಿತ್ತು. ಅದಕ್ಕೆ ಮರಳುಗೂಡು ಕಟ್ಟುವಾಟ. ತೆರೆ ಹಿಂದ್ಹೋದಾಗ ಹಾಂ! ಈಗ ಬಯವಿಲ್ಲ ಎಂಬಂತೆ ಮುಖ ಮಾಡಿ ಕ್ಷಣಾರ್ಧದಲ್ಲಿ ಗೂಡುಕಟ್ಟಿ ತೆರೆ ಬಂದು ಗೂಡು ಎಳೆದ್ಹೋದಾಗ ಮತ್ತೆ ಅಯ್ಯೋ ಎಂಬಂತೆ ನಟಿಸುವುದು ನನ್ನ ದಿನನಿತ್ಯದ ಆಟ.
ನನಗೆ ನೆನಪಿದ್ದ ಹಾಗೆ ಇದು ದಿನನಿತ್ಯದ ಪರಿಪಾಠ ! ಬೆಳಿಗ್ಗೆ ಅದೆಲ್ಲಿಂದಲೋ ಅಪ್ಪ ಪ್ರತ್ಯಕ್ಷನಾಗಿರುತ್ತಿದ್ದ. ಇನ್ನೂ ನಿದ್ದೆಯಲ್ಲಿ ಉರುಳಾಡುತ್ತಿದ್ದ ನನ್ನ ಮುದ್ದಿನಿಂದ ಎಬ್ಬಿಸುತ್ತಿದ್ದ. ಮುಖ ತೊಳೆದ ನಂತರ ನನ್ನ ಊರ ಮುಂದಿನ ದೇವಸ್ಥಾನಕ್ಕೆ ಕರೆದೊಯ್ಯುತ್ತಿದ್ದ. ಜುಟ್ಟು ಬಿಟ್ಟ ಭಟ್ಟನೊಬ್ಬ ಪ್ರಸಾದ ನೀಡಿ ಹಣೆಗೆ ದೊಡ್ಡ ಕುಂಕುಮವನ್ನು ತನ್ನ ಕೈಯಾರೆ ಹಚ್ಚುತ್ತಿದ್ದ. ದೇವಸ್ಥಾನದ ಎದುರು ನಿಂತಿರುವ ಆಕಳಿನ ಹತ್ತಿರ ಕರೆದೊಯ್ದು ಇದು ನಮಗೆಲ್ಲಾ ದೇವ್ರು ಕಣೋ, ನಮಸ್ಕಾರ ಮಾಡು ಎನ್ನುತ್ತಿದ್ದಂತೆ ನಾನು ಕೈಯಿಂದ ಮೃದುವಾಗಿ ಮುಟ್ಟಿ ಕೈ ಮುಗಿಯುತ್ತಿದ್ದೆ. ಮನೆಗೆ ಬಂದವನು ಕುಚ್ಚಲಕ್ಕಿಯ ಗಂಜಿ ಕುಡಿಯುತ್ತಲೇ ಅಪ್ಪನ ಆಡ್ಕೋ ಹೋಗ್' ಎಂಬ ಪ್ರೀತಿಯ ಮಾತಿಗೆ ಸಮುದ್ರ ದಂಡೆಗೆ ಓಡುತ್ತಿದ್ದೆ.
ಮಧ್ಯಾಹ್ನ ಮನೆಗೆ ಬಂದ್ರೆ ಅಪ್ಪ ಇಲ್ಲ. ಅಮ್ಮ ಸ್ನಾನಕ್ಕೆ ಹೋಗಿರುತ್ತಿದ್ದಳು. ಸ್ನಾನದಿಂದ ಬಂದವಳೇ ನನ್ನ ಮೊಗ ತೊಳೆದು ದೊಡ್ಡಕ್ಕೆ ದೇವಸ್ಥಾನದ ಪೂಜಾರಿ ಇಟ್ಟ ಕುಂಕುಮವನ್ನು ಒರೆಸಿ ತೆಗೆಯುತ್ತಿದ್ದಳು. ಸ್ನಾನ ಮಾಡಿದ ನಂತರ ರಾತ್ರಿ ಆಗುವವರಗೆ ಅಮ್ಮ ಕುಂಕುಮ ಇಟ್ಟು ಕೊಳ್ಳುತ್ತಿರಲಿಲ್ಲ.

ಮಧ್ಯಾಹ್ನ ಊಟದ ನಂತರ ನಾನು ಗಾಢ ನಿದ್ರೆಗೆ ಜಾರುತ್ತಿದ್ದೆ. ಮನೆ ಎದುರಿನ ಕಟ್ಟೆ ನನ್ನ ನಿದ್ರೆಗೆ ಸೂಕ್ತ ಜಾಗವಾಗಿತ್ತು. ಸಂಜೆ ಎಚ್ಚರಾಗುತ್ತಲೇ ನಾನು ಎದ್ದು ನೋಡಿದ್ರೆ ಮನೆ ಬಾಗಿಲು ಮುಚ್ಚಿರುತ್ತಿತ್ತು. ಬಾಗಿಲು ಬಡಿದರೆ ಎದುರಿಗೆ ಬರುವ ಅಪ್ಪ ನನ್ನ ತಲೆ ನೇವರಿಸಿ ಮುದ್ದು ಮಾಡುತ್ತಿದ್ದ. ಲಘುಬಗೆಯಲ್ಲಿ ಮುಖ ತೊಳೆದ್ರೆ ನನ್ನ ಕರೆದುಕೊಂಡು ಅಪ್ಪ ಹೊರಡುತ್ತಿದ್ದ. ಹೋಗುವಾಗ ದಾರಿಯಲ್ಲಿ ಬಿಳಿ ಟೊಪ್ಪಿಯೊಂದನ್ನ ತೆಗೆದವನು ನನ್ನ ತಲೆಗೇರಿಸುತ್ತಿದ್ದ. ನನಗೆ ಆ ಟೊಪ್ಪಿಯನ್ನು ಹಾಕಿಕೊಳ್ಳುವುದೆಂದರೆ ಭಾರೀ ಖುಷಿ. ಊರ ಮುಂದಿನ ಮಸ್ಜಿದ್ಗೆ ನನ್ನ ಕರೆದೊಯ್ಯುತ್ತಿದ್ದ. ಗುಂಪುಗೂಡಿ ಸಾಲಾಗಿ ನಿಂತವರ ಮಧ್ಯೆ ನಾನು ನಿಲ್ಲುತ್ತಿದ್ದೆ. ಮಂಡಿಯೂರಿ ಕಣ್ಮುಚ್ಚಿ ಹಣೆ ಹಚ್ಚಿ ಎದ್ದರೆ ಬರುವಾಗ ಅಪ್ಪ ಆಲದ ಮರದ ಕೆಳಗಿನ ಆಕಳು ನೋಡಿದವನೇ ನಾಳೆ ನಿನಗೆ ಬಡಾ ಬಿರಿಯಾನಿ ತತರ್ೆನೆ, ಆಯ್ತಾ ಈಗ ಆಡ್ಕೋ ಹೋಗ್'. ಅಪ್ಪನ ಪ್ರೀತಿಯ ಮಾತಿಗೆ ನಿಲ್ಲದೇ ನಾನು ಸಮುದ್ರ ದಂಡೆಗೆ ಓಡುತ್ತಿದ್ದೆ. ಮತ್ತೆ ಮರಳು ಗೂಡು ಕಟ್ಟುವಾಟ.

ನನಗೆ ಇಬ್ಬರೂ ಅಪ್ಪಂದಿರೂ ಪ್ರಿಯರೇ ! ಬೆಳಿಗ್ಗೆ ದೇವಸ್ಥಾನ್ಕಕೆ ಕರೆದೊಯ್ಯುವ ಅಪ್ಪ. ಸಂಜೆ ಮಸ್ಜಿದ್ಗೆ ಕರೆದೊಯ್ಯುವ ಅಪ್ಪ. ಆದ್ರೆ ನನಗೇಕೆ ಒಬ್ಳೆ ಅಮ್ಮ ? ಇಬ್ಬರು ಅಪ್ಪಂದಿರಿದ್ದರೆ ಚೆನ್ನ ಎಂದೆನಿಸುತ್ತಿತ್ತು. ಒಬ್ಬ ಅಪ್ಪ ಮನೇಲಿದ್ದಾಗ ಹೂವು ಮುಡಿದು ಕುಂಕುಮ ಇಟ್ಟುಕೊಳ್ಳುತ್ತಿದ್ದ ಅಮ್ಮ, ಇನ್ನೊಬ್ಬ ಅಪ್ಪನಿದ್ದಾಗ ಕುಂಕುಮ ಇಡುತ್ತಿರಲಿಲ್ಲ. ನನ್ನ ಹಣೆಯ ಕುಂಕುಮವನ್ನೂ ಬಿಡದೇ ಒರೆಸಿ ತೆಗೆಯುತ್ತಿದ್ದಳು. ಅಮ್ಮ ಎರಡೂ ರೀತಿಯಲ್ಲೂ ನನಗೆ ಸುಂದರವಾಗೇ ಕಾಣುತ್ತಿದ್ದಳು.
'ಅಪ್ಪ' ರಾತ್ರಿ ಬರುತ್ತಿದ್ದ ಎಂದು ಅಮ್ಮ ಎಂದೋ ಹೇಳಿದ ನೆನಪು. ಆತ ಬಂದಾಗ ನಾನು ಎಂದೂ ಎಚ್ಚರ ಇರಲಿಲ್ಲ. ಬೆಳಿಗ್ಗೆ ಎದ್ದಾಗ ದೇವಸ್ಥಾನಕ್ಕೆ ಹೋಗೋದನ್ನು ಮಾತ್ರ ತಪ್ಪಿಸುತ್ತಿರಲಿಲ್ಲ.
'ಅಪ್ಪ' ಮಧ್ಯಾಹ್ನ ಬರುತ್ತಿದ್ದ ಎಂದು ಅಮ್ಮ ಎಂದೋ ಹೇಳಿದ ನೆನಪು. ಅವನು ಬರುವುದರೊಳಗಾಗಿ ನಾನು ಮಧ್ಯಾಹ್ನ ಊಟ ಮಾಡಿ ನಿದ್ದೆಗೆ ಹೋಗಿರುತ್ತಿದ್ದೆ, ಅಮ್ಮ ತಪ್ಪದೇ ಎದೆಗವಚಿಕೊಂಡು ನಿದ್ದೆ ಮಾಡಿಸುತ್ತಿದ್ದಳು. ಎದ್ದಾಗ ಮನೆ ಎದುರಿನ ಕಟ್ಟೆಯ ಮೇಲಿರುತ್ತಿದ್ದೆ. ಸಾಯಂಕಾಲ ಅಪ್ಪನೊಂದಿಗೆ ಮಸ್ಜಿದ್ಗೆ ಹೋಗೋದನ್ನ ಮಾತ್ರ ತಪ್ಪಿಸುತ್ತಿರಲಿಲ್ಲ.
ಆದರೆ ಒಂದು ವಿಷಯ ನನಗೆ ಅರ್ಥ ಆಗ್ತಾ ಇರಲಿಲ್ಲ. ಇಬ್ಬರು ಅಪ್ಪಂದಿರು ಎಂದೂ ಎದುರು ಬದಿರಾಗಿರಲಿಲ್ಲ. ಅಮ್ಮ ಯಾವತ್ತೂ ಒಬ್ಬ ಅಪ್ಪನ ಕುರಿತು ಇನ್ನೊಬ್ಬ ಅಪ್ಪನೊಂದಿಗೆ ಮಾತನಾಡುತ್ತಿರಲಿಲ್ಲ. ವಿಚಿತ್ರ ಎಂದರೆ ನಾನು ಯಾವತ್ತೂ ಇವರಿಬ್ಬರಲ್ಲಿ ಒಬ್ಬರೊಬ್ಬರ ಬಗ್ಗೆ ಯಾವತ್ತೂ ಪ್ರಶ್ನೆ ಎತ್ತಲಿಲ್ಲ. ಒಂದು ರೀತಿಯ ನಿಗೂಢ ಭಯ ನನ್ನಲ್ಲಿ ತುಂಬಿಕೊಂಡಿತ್ತು.

ಅವತ್ತೊಂದು ದಿನ ಬೆಳಿಗ್ಗೆ ಅಮ್ಮ ಏನೋ ಗಂಭೀರವಾಗಿ ಮಾತನಾಡುತ್ತಿದ್ದಳು. ಯಾಕೆ ಹೊಡೆದಾಡ್ತೀರಾ ? ಧರ್ಮ ನಿಮಗೆ ಅನ್ನ ಕೊಡೊಲ್ಲಾ. ಧರ್ಮ ಮನುಷ್ಯತ್ವ ಇಲ್ಲದ್ದು. ದೇವರು ಬರೀ ಕಲ್ಪನೆ. ನಿಮ್ಮ ಮನಸ್ಸಿನ ಮೇಲೆ ನಂಬಿಕೆ ಇಡ್ರಪ್ಪಾ. ಮನುಷ್ಯರ ಮೇಲೆ ನಂಬಿಕೇನೆ ಕಳೆಯುವಂತದ್ದು ಧರ್ಮ. ಅದನ್ನ ಕಟ್ಟಕೊಂಡು ಯಾಕೆ ಹೆಣಗಾಡ್ತೀರಿ ? ಬಿಟ್ಟ ಬಿಡ್ರಿ, ಸುಮ್ಮನೆ ಮನುಷ್ಯರಂತೆ (?) ಇದ್ದಬಿಡ್ರಿ. ಅಮ್ಮ ಹೇಳಿದ್ದು ನನಗೆ ಯಾಕೆ ನೆನಪಿದೆ ? ಅಮ್ಮನ ಮಾತುಗಳಲ್ಲಿ ಏನೋ ನಿಗೂಡತೆ ನೋವು ನನಗೆ ಕಾಣಿಸುತ್ತಿತ್ತು. ಅಪ್ಪ ಕೇಸರಿ ರುಮಾಲು ಹೆಗಲಿಗೆ ಹಾಕಿಕೊಂಡು ಹಣೆಗೆ ಉದ್ದನೆ ತಿಲಕವಿಟ್ಟಿದ್ದ. ನಾನು ಏಳುವ ಮೊದಲೇ ಅಪ್ಪ ದೇವಸ್ಥಾನಕ್ಕೆ ಹೋಗಿ ಬಂದನೇ? ಅಪ್ಪ ಹೇಳುತ್ತಿದ್ದ, ಅವರನ್ನು ನಿನರ್ಾಮ ಮಾಡಬೇಕು. ನಮ್ಮ ದೇಶದಿಂದಲೇ ಅವರನ್ನು ಓಡಿಸಬೇಕು ಎಂದು ಏನೇನೋ ಹೇಳುತ್ತಿದ್ದ. ಅಮ್ಮ ಅಪ್ಪನ ಮಾತು ಅರಗಿಸಿಕೊಳ್ಳುವುದು ಕಷ್ಟ ಎಂಬಂತೆ ಹೇಳಿದ್ದಕ್ಕೆಲ್ಲ ತಲೆ ಅಲ್ಲಾಡಿಸುತ್ತಿದ್ದಳು.

ನಾನು ಹಾಸಿಗೆಯಲ್ಲಿ ಮಿಸುಕಾಡಿದ್ದ ಕಂಡ ಅಪ್ಪ ನನ್ನ ಎಬ್ಬಿಸಿದವನೇ ಮುಖ ತೊಳೆಸಿ ನಡೆ, ಇವತ್ತು ನೀನು ನಂಜೊತೆ ಇರಲೇಬೇಕು ಎಂದು ಕರೆದೊಯ್ದ. ಅಮ್ಮ ಯಾಕೋ ಮುಖ ಸಣ್ಣಗೆ ಮಾಡಿಕೊಂಡು ನನ್ನ ತಡೆದಳು. ಅಪ್ಪ ಅವಳಿಗೆ ಸನ್ನೆ ಮಾಡಿ ನನ್ನ ಕರೆದೊಯ್ದ. ಪ್ರತಿದಿನದಂತೆ ಆ ದಿನ ಅಪ್ಪ ದೇವಸ್ಥಾನಕ್ಕೆ ನನ್ನ ಕರೆದೊಯ್ಯಲಿಲ್ಲ. ಊರ ಮುಂದಿನ ಮುಖ್ಯ ರಸ್ತೆಗೆ ನನ್ನ ಕರೆದುಕೊಂಡು ಹೊರಟ. ಅದೆಲ್ಲಿಂದಲೋ ಆವತ್ತು ಸಾವಿರಾರು ಜನ ರಸ್ತೆಯ ಎರಡೂ ಬದಿಗಳಲ್ಲಿ ಜಮಾಯಿಸಿದ್ದರು. ಎಲ್ಲೆಲ್ಲೂ ಕೇಸರಿ. ಎಲ್ಲೆಲ್ಲೂ ಬಾವುಟಗಳು. ಎಲ್ಲರೂ ಮೆರವಣಿಗೆ ಹೊರಟಿದ್ದರು. ನನ್ನ ಕೈಯಲ್ಲೂ ಅಪ್ಪ ಒಂದು ಬಾವುಟ ನೀಡಿ ಹಣೆಗೆ ಉದ್ದ ತಿಲಕವಿಟ್ಟ. ನಾನು ಖುಷಿಯಿಂದ ಬಾವುಟ ಹಿಡಿದು ಹೊರಟೆ. ಊರ ಮುಂದಿನ ದೊಡ್ಡ ಮೈದಾನದಲ್ಲಿ ಯಾರೋ ಉದ್ದುದ್ದ ಮಾತನಾಡಿದರು. ನನಗೆ ತುಂಬಾ ಸುಸ್ತಾಗಿತ್ತು.

ಮಧ್ಯಾಹ್ನದ ಊಟದ ಹೊತ್ತಿಗೆ ಮನೆ ಎದುರು ನನ್ನ ಬಿಟ್ಟು ಅಮ್ಮನ ಕರೆದು ಹೇಳಿ ಅಪ್ಪ ಹೊರಟೋದ. ನಾನು ಮನೆಗೆ ಬಂದದ್ದೇ ನನ್ನ ಹಣಗೆ ಬಳಿದ ಕುಂಕುಮವನ್ನೆಲ್ಲಾ ಅಳಿಸಿದ ಅಮ್ಮ, ಕೈಲಿದ್ದ ಬಾವುಟ ಕಸಿದು ಒಲೆಗೆ ಎಸೆದಳು. ನಾನು ಊಟ ಮಾಡಿದವನೇ ಮಲಗಿದೆ. ಸ0ಜೆ ಎಚ್ಚರಾದಾಗ ಸಣ್ಣಗೆ ಜ್ವರವಿತ್ತು. ನಾನು ನರಳುತ್ತಿದ್ದೆ. ಅಪ್ಪ ಇದ್ದಾನೇನೋ ನಾನು ಹುಡುಕಾಡಿದೆ. ಅಪ್ಪ ಕಾಣಲಿಲ್ಲ. ಒಬ್ಬನೇ ಮಸ್ಭಿದ್ಗೆ ಹೋಗಿರಬೇಕು ಎಂದುಕೊಂಡೆ.

ಅಮ್ಮ ಯಾಕೋ ತುಂಬಾ ಖಿನ್ನಳಾಗಿದ್ದಳು. ಕ್ಷಣಕ್ಷಣ ಬಾಗಿಲೆಡೆಗೆ ಇಣುಕಿ ನೋಡಿಕೊ0ಡು ಬರುತ್ತಿದ್ದಳು. ಸುಮಾರು ಹೊತ್ತಿನವರೆಗೆ ನನ್ನೆಡೆಗೆ ಮತ್ತು ಬಾಗಿಲ ಕಡೆಗೆ ನೋಡಿದ ಅಮ್ಮ ಆವರೆಗೆ ಕುಂಕುಮ ಇಟ್ಟುಕೊಳ್ಳದ ಹಣೆಗೆ ಕುಂಕುಮ ಇಟ್ಟುಕೊಂಡು ತಲೆಗೆ ಸುವಾಸನೆಯ ಮಲ್ಲಿಗೆ ಮುಡಿದು ನನ್ನ ಪಕ್ಕದಲ್ಲಿ ಬಂದು ಕುಳಿತಳು.

ನನಗೆ ಜ್ವರ ವಿಪರೀತವಿತ್ತು. ಬಾಗಿಲು ಬಡಿದ ಸದ್ದಾಯಿತು. ಪ್ರತೀ ಸಲ ಬಾಗಿಲು ತೆರೆವಾಗೊಮ್ಮೆ ಯಾರು ? ಎಂದು ಪ್ರಶ್ನಿಸದೆ ಬಾಗಿಲು ತೆರೆಯದ ಅಮ್ಮ ನನ್ನ ನರಳಾಟದಲ್ಲಿ ಎಲ್ಲಾ ಮರೆತು ದಢಕ್ಕನೆದ್ದು ಬಾಗಿಲು ತೆರೆದಳು. ನಾನು ಅರೆ ತೆರೆದ ಕಣ್ಣಲ್ಲಿ ನೋಡುತ್ತಿದ್ದೆ. ಅಪ್ಪ ಬಂದಿರಬಹುದು. ಹೌದು! ಅಪ್ಪ ಬಂದಿದ್ದ. ಆದ್ರೆ ಪ್ರತಿದಿನ ರಾತ್ರಿ ಬರುವ ಅಪ್ಪ ಬರದೇ ಮಸ್ಜ್ಭಿದ್ಗೆ ಕರೆದೊಯ್ಯುವ ಅಪ್ಪ ಬಂದಿದ್ದ. ಅಪ್ಪ ನನ್ನತ್ತ ಬಂದು ತಲೆ ನೇವರಿಸಿ ಮುದ್ದು ಮಾಡಬಹುದು ಎಂಬ ನಿರೀಕ್ಷೆಯಲ್ಲಿದ್ದೆ. ಜ್ವರದ ತಾಪದಿಂದ ನಿದ್ದೆಗೆ ಜಾರಿದ್ದೆ.

ರಾತ್ರಿ ಉಕ್ಕುವ ಸಮುದ್ರದ ಆರ್ಭಟಕ್ಕಿಂತ ಜೋರು ಮಾತಿಗೆ ಎಚ್ಚರವಾಯ್ತು. ಹಲ್ಕಾ ಸೂಳೆ! ನನಗೆ ಮೋಸ ಮಾಡಿದೆ. ನಾನೊಬ್ಬನೇ ಅಂದ್ಕೊಂಡಿದ್ದೆ. ಮತ್ತೆಷ್ಟು ಜನ ಇದ್ದಾರೋ? ನಮ್ಮ ಧರ್ಮದವಳಂತೆ ಸೋಗು ಬೇರೆ ಹಾಕಿದ್ದಿ. ಇವತ್ತು ನಿನ್ನ ಬಣ್ಣ ಬಯಲಾಯ್ತು.

ನಾನು ಅರೆ ತೆರೆದ ಕಣ್ಣುಗಳನ್ನು ತೆರೆಯಲು ಪ್ರಯತ್ನ ಪಟ್ಟೆ. ಅಮ್ಮನ ಜಡೆ ಹಿಡಿದುಕೊಂಡಿದ್ದ ಅಪ್ಪ(?) ಹಣೆಯ ಕುಂಕುಮ ಒರೆಸುತ್ತಿದ್ದ. ಹೂವು ಹರಿದ ರಭಸಕ್ಕೆ ಅದು ನನ್ನ ಮೇಲೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು. ಕೂಗಬೇಕೆಂದುಕೊಂಡೆ. ಸಮುದ್ರದ ಆರ್ಭಟ ಜೋರಾಯ್ತು. ನಾನು ಅಪ್ರಯತ್ನವಾಗಿ ಕಣ್ಣು ಮುಚ್ಚಿದೆ.

ಎಚ್ಚರಾದಾಗ ನಾನು ಗೌಜುಗದ್ದಲ ರಾಶಿರಾಶಿ ಜನರ ಓಡಾಟವಿರುವ ಯಾವುದೋ ಊರಲ್ಲಿದ್ದೆ. ನಾನೆಲ್ಲಿದ್ದೇನೆ? ಅಮ್ಮ ಎಲ್ಲಿ? ಅಪ್ಪ? ಅಳು ಒತ್ತರಿಸಿಕೊಂಡು ಬಂತು. ಜ್ವರದಿಂದ ನಡುಕ. ಅಪರಿಚಿತ ಊರಲ್ಲಿ ನಾನು ಜ್ವರದಿಂದ ನಡುಗುತ್ತ ಅಲೆದಾಡಿದೆ. ಹಸಿವಾದಾಗ ಅಪ್ರಯತ್ನವಾಗಿ ಕೈ ಮುಂದಕ್ಕೆ ಚಾಚಿತ್ತು.

ಆವತ್ತು ಬೀದಿಗೆ ಬಿದ್ದವನು ಇವತ್ತಿನವರೆಗೂ ನಾನು ಪ್ರಪಂಚದ ಮನುಷ್ಯ. ನಾನು ಹೋದಲ್ಲೇ ಮನೆ. ಮಲಗಿದಲ್ಲೇ ನಿದ್ದೆ. ನಾನು ದೇವರನ್ನು ನಂಬುವುದಿಲ್ಲ. ಸಹಾಯ ಕೇಳಿದವರಿಗೆ ಇಲ್ಲಾ ಎನ್ನುವುದಿಲ್ಲ. ಮಗುವಿನ ಮುಗ್ದತನ ನನ್ನಲ್ಲಿ ಇನ್ನೂ ಉಳಿದುಕೊಂಡಿದೆ. ನಾನು ಯಾವ ಧರ್ಮ ಹಾಗೂ ಸಂಬಂಧದಿಂದ ಕಲ್ಷ್ಮಶನಾಗಲಿಲ್ಲ. ನನ್ನೆದೆ ಮಗುತನದ ಮುಗ್ದತೆ ತುಂಬಿರುವ ಗೂಡು. ಮುಸ್ಲಿಂರೆಂದರೂ ಸೈ, ಹಿಂದೂಗಳೆಂದರೂ ಸೈ, ನನ್ನೆದೆ ಮನುಷ್ಯನಾಗಿ ತೆರೆದುಕೊಳ್ಳುತ್ತೆ. ನಾನು ಯಾರೊಂದಿಗೆ ಮಾತನಾಡುವಾಗಲೂ ಭಯ ಬೀಳುವುದಿಲ್ಲ. ಧರ್ಮವೆಂದರೆ ನನಗೆ ರೇಜಿಗೆ. ಹಲ್ಕಾ ಸೂಳೆ! ಆ ಶಬ್ದ ಇನ್ನೂ ಕಿವಿಯಲ್ಲಿ ರಿಂಗಣಿಸುತ್ತಿದೆ. ನನಗದರ ಅರ್ಥ ಅಂದು ಆಗಿರಲಿಲ್ಲ. ಅಮ್ಮ(?) ಕೆಲವೊಮ್ಮೆ ಕುಂಕುಮವಿಟ್ಟು, ಕೆಲವೊಮ್ಮೆ ಕುಂಕುಮ ಅಳಿಸಿ ಇರುತ್ತಿದ್ದ ರೀತಿ ಬರೀ ಸಿಂಗರಿಸಿಕೊಳ್ಳುವ ವಿಧಾನ ಅಂದ್ಕೊಂಡಿದ್ದೆ.

ಅಪ್ಪ(?)ಆಡ್ಕೋ ಹೋಗ್' ಅನ್ನುತ್ತಿದ್ದುದು ಅವನಿಗೆ ನನ್ನ ಮೇಲಿನ ಪ್ರೀತಿ ಅಂದುಕೊಂಡಿದ್ದೆ. ಅಮ್ಮನಿಲ್ಲದೆ ಬೆಳೆದ ಬುದ್ಧಿಗೆ ಅವೆಲ್ಲದರ ಅರ್ಥ ತಿಳಿಯುತ್ತ ಬಂದಂತೆ ಕೆಲವೊಮ್ಮೆ ನನಗೆ ಅಮ್ಮನೆಂದರೆ ಹೇಸಿಗೆ. ಸಂಬಂಧಗಳೆಂದರೆ ಬರೀ ಮುಚ್ಚಿದ ಬಾಗಿಲೊಳಗಿನ ಆಟ. ವಯಸ್ಸು ಮುಗಿದ ನಂತರ ಅದು ಬರೀ ಹೊರಲಾರದೇ ಹೊತ್ತುಕೊಳ್ಳುವ ಭಾರ. ನನ್ನಮ್ಮ ನನ್ನ ತೊರೆದು ಹೋಗಲು ಕಾರಣವಾದ ಧರ್ಮವೆಂದರೆ ನನಗೆ ರೇಜಿಗೆ.

ನನಗೆ ಅಮ್ಮನೆಂದರೆ ಹೇಸಿಗೆ ! ನನ್ನ ಅಮ್ಮನ ಬಗ್ಗೆ ಪ್ರೀತಿ! ಅಮ್ಮ ಬರೀ ಕಾಮಕ್ಕಾಗಿ ಹಾಗೇ ಮಾಡಿರಲಿಕ್ಕಿಲ್ಲ ಅನ್ನಿಸುತ್ತೆ. ಹಾಗಾದರೆ ನನ್ನಮ್ಮ ನನ್ನ ಬಿಟ್ಟು ಹೋಗಿದ್ದೇಕೆ? ಹೋದದ್ದಾದರೂ ಎಲ್ಲಿಗೆ ? ಬದುಕು ಪ್ರಶ್ನೆಗಳನ್ನು ಹೊತ್ತುಕೊಂಡು ಉತ್ತರವನ್ನೂ ಅದನ್ನು ನೀಡುವ ಅಮ್ಮನನ್ನೂ ಹುಡುಕಿಕೊಂಡು ಅಲೆಯಿತು. ಪ್ರಶ್ನೆ ಕೇಳುವ ಮನಸ್ಸು ತಕರ್ಿಸುವುದನ್ನೂ ಕಲಿತುಕೊಂಡು ಉತ್ತರ ತಂತಾನೆ ಕಂಡುಕೊಂಡಿತು. ಅದೆಲ್ಲಾ ಸತ್ಯಾನಾ? ಉತ್ತರ ಕೊಡೋಕೆ ಅಮ್ಮ ಎಲ್ಲಿದ್ದಾಳೆ?

(ದಟ್ಸ್ ಕನ್ನಡದಲ್ಲಿ ಪ್ರಕಟವಾದದ್ದು)

ಶೂನ್ಯ (ಸಣ್ಣ ಕಥೆ)

ಕಡಲ ತೆರೆಗೆ ಆ ಕಡಲಿನ ಸುತ್ತ ಹರಿದು ಬೀಸುವ ಗಾಳಿಗೆ ವಿಚಿತ್ರ ಶಕ್ತಿಯಿದೆ. ಕೇವಲ ದೇಹಕ್ಕೆ ಮಾತ್ರ ಬಿಡುಗಡೆಯ ಭಾವ ಒದಗಿಸದೆ ಮನಸಿನಾಳದಲ್ಲಿಯ ಗುಟ್ಟುಗಳನ್ನು ಹೊರಗೆಡಹುವ ಶಕ್ತಿ ಕಡಲಿಗಿದೆ. ಕುಡಿತದ ಅಮಲು ನೀಡುವ ನಶೆಗಿಂತ, ಅದು ಹೊರಗೆಡಹುವ ಸತ್ಯಕ್ಕಿಂತ ಹೆಚ್ಚಿನ ಆಳದ ಸತ್ಯ, ಪ್ರಶ್ನೆ ಮೂಡಿಸುವ ನಶೆ ಕಡಲ ತೀರಕ್ಕಿದೆ.

ದಿನ ನಡೆದಾಡುವ ನನ್ನ ಕಥೆಯ ಪಾತ್ರಗಳ ಹೆಜ್ಜೆ ಈ ಕಡಲ ಕಿನಾರೆಯ ಮಡಿಲೊಳಗಿದೆ. ಈ ಕಥೆಯಲ್ಲಿರುವುದು ಎರಡೇ ಪಾತ್ರಗಳು. ಮನುಷ್ಯನ ಹುಟ್ಟಿಗೆ ಕಾರಣವಾದ ಆಡಂ ಮತ್ತು ಈವ್ರಂತೆ ಇವರು ತಮ್ಮ ಹುಟ್ಟಿನ ಪ್ರಶ್ನೆಯನ್ನು ಮನಸೊಳಗೆ ತುಂಬಿಕೊಂಡಿರುವವು.

ಆತ...
ದಿನ ಈ ತುದಿಯಿಂದ ಆ ತುದಿಗೆ ನಡೆದಾಡುವ ವಿಕ್ಷಿಪ್ತ, ಪ್ರಸನ್ನ ಮೊಗದ ಈ ವ್ಯಕ್ತಿಯ ಮನಸೊಳಗಿನ ಮೌನ, ತಾಕಲಾಟಗಳು ಕಡಲ ತೆರೆಗಳಿಗೆ ಅರ್ಥವಾಗುತ್ತೆ. ದಡಕ್ಕೆ ಬಂದು ಬಡಿದು ಹಿಂದೆ ಸರಿಯುವ ತೆರೆ ಪ್ರತಿಸಲವೂ ಅವನ ಭಾವನೆಗಳನ್ನು ತನ್ನೊಳಗೆ ಸೆಳೆದುಕೊಂಡು ಆತ ಪ್ರಸನ್ನತೆಗೆ ಸಾಗುತ್ತಾನೆ. ಕಡಲ ಒಡಲೊಳಗೆ ಇರುವ ಆತನ ಹೆಜ್ಜೆಗಳಿಗೆ (?)ಲೆಕ್ಕವಿಲ್ಲ. ಒಂಟಿ ಬದುಕಿನ ಅವನಿಗೂ ಅಸಂಖ್ಯಾತ ತೆರೆಗಳ ಕಡಲಿಗೂ ಅವಿನಾಭಾವ ಸಂಬಂಧ.

ಆಕೆ...
ನನ್ನ ಕಥೆಯೊಳಗಿನ ಗಂಡು ಪಾತ್ರದಷ್ಷೇ ಒಂಟಿ, ಈ ಹೆಣ್ಣು ಪಾತ್ರ. ಇವಳ ಗೆಜ್ಜೆ ಸಪ್ಪಳಕ್ಕೆ ಈ ಕಡಲ ಅಲೆಗಳ ಉಬ್ಬರ ಹೆಚ್ಚುತ್ತದೆ. ಅದೋ ಆ ತುದಿಯಿಂದ ಏರೇರಿ ಬರುವ ಅಲೆ ಇವಳ ಕಾಲಡಿಯಲ್ಲಿ ಸೂಕ್ಷ್ಮವಾಗಿ ನುಸುಳಿ ಖುಷಿಗೊಳ್ಳುತ್ತದೆ. ಅವಳ ಮಂದಸ್ಮಿತಕ್ಕೆ ಮನಸೋತ ಸೂರ್ಯ ಪ್ರಖರತೆಯನ್ನು ಮೆದುಗೊಳಿಸಿ, ಮೂಖವಿಸ್ಮಿತನಾಗುತ್ತಾನೆ. ಹೆಜ್ಜೆಯಿಟ್ಟಲ್ಲೆಲ್ಲಾ ಅವಳ ತಾಕಲಾಟಗಳನ್ನು ಶರಧಿಯ ಮರಳು ತನ್ನೊಳಗೆ ಹುದುಗಿಸಿಕೊಳ್ಳುತ್ತೆ. ಕಡಲ ತಡಿಯಲ್ಲಿ ಓಡಾಡುವ ಏಡಿಗಳೆಲ್ಲ ಬಿಲದೊಳಗೆ ಇವಳ ಯೋಚನೆ, ಕಲ್ಪನೆಗಳನ್ನು ಹೊತ್ತು ಓಡುತ್ತವೆ. ಈಕೆ ಒಂಟಿ(?) ಕಡಲಿಗೋ ಖುಷಿ, ಈಕೆ ಅರ್ಥವಾಗುತ್ತಾಳೆ ಆಳ ಶರಧಿಯ ಗರ್ಭದ ಅಲೆಗಳಿಗೆ.


ದಿನ ನಡೆದಾಡುವ ಅದೇ ಶರಧಿಯ ದಡ. (ಶರಧಿಗೆ ದಡ ಎನ್ನುವ ಶಬ್ಧವೇ ವಿಚಿತ್ರ ಅನ್ನಿಸುತ್ತದೆ. ಹಗಲು ದಡವಾಗಿದ್ದು ರಾತ್ರಿ ಸಮುದ್ರ. ತ್ಸುನಾಮಿಯೆದ್ದರಂತೂ ಭೂಮಿಯೇ ಸಮುದ್ರ. ಎಲ್ಲಿಯ ದಡ ಎಲ್ಲಿಯ ಸಮುದ್ರ ? ಮಧ್ಯೆ ಮನುಷ್ಯನ ಸ್ವಾರ್ಥ ಲಾಲಸೆಗಳ ಬೇಲಿ, ಮನೆ, ಮಂದಿರ...) ಈತನ ಹೆಜ್ಜೆಗಳನ್ನು ಒಳಗೆಳೆದುಕೊಂಡ ಅಲೆ ಆಕೆಯ ಕಾಲಡಿ ನುಸುಳುತ್ತೆ. ಅವನ್ಯಾರೋ ಇವಳ್ಯಾರೋ... !


ಮನುಷ್ಯ ಒಬ್ಬನೇ ಅಪೂರ್ಣ. ಬದುಕಿನ ಯಾವುದೋ ತಿರುವಿನಲ್ಲಿ ಆತನ ಮನಸ್ಸು ಪರಿಪೂರ್ಣತೆಯತ್ತ ತುಡಿಯುತ್ತದೆ. ಬಾಲ್ಯ ಪರಿಪೂರ್ಣತೆಯಲ್ಲಿರುತ್ತದೆ ಬಾಲ್ಯದ ನಂತರದ ದಿನಗಳಲ್ಲಿ ಮನುಷ್ಯ ಪರಿಪೂರ್ಣತೆಯನ್ನು ಕಳೆದುಕೊಳ್ಳುತ್ತಾನೆ ! ಅಲ್ಲಿಂದ ಜೀವನ ಪೂತರ್ಿ ಅಪೂರ್ಣತೆಯೆಡೆಗೆ ಸಾಗುತ್ತಿರುವ ತನ್ನಾತ್ಮವನ್ನು ಪೂರ್ಣತೆಗೆ ಸಾಗಿಸಲು ಹೆಣಗಾಡುತ್ತಾನೆ. ಈ ಹೆಣಗಾಟದಲ್ಲಿ ಗಂಡಿಗೆ ಹೆಣ್ಣು, ಹೆಣ್ಣಿಗೆ ಗಂಡು ಸನ್ನೆಕೋಲು. ಸಂಗಮ ಮೊದಲ ಹೆಜ್ಜೆ.

ಕಥೆಗಾರನಾದ ನಾನು ಈ ಪಾತ್ರಗಳನ್ನು ಒಂದಾಗಿಸುವ ಪ್ರಯತ್ನ ಮಾಡಲಾರೆ. ಅವೆರಡು ಪಾತ್ರಗಳು ಒಂಟಿತನದಿಂದ ವಿಶ್ವಸಂಪರ್ಕಕ್ಕೆ ತುಡಿಯುತ್ತಿರುವ ಪಾತ್ರಗಳು. ಒಂಟಿತನ ಮತ್ತು ವಿಶ್ವ ಸಂಪರ್ಕ ಪರಸ್ಪರ ವಿರುದ್ಧ ಅಂತನ್ನಿಸಿದರೂ ಕೂಡ ಅವೆರಡೂ ಸಂಬಂಧಗಳ ಸಂಪರ್ಕದ ಕೊಂಡಿ ಹುಡುಕುವ ತವಕದ ಮೂಲ ರೂಪಗಳೇ... ಹಲವು ನದಿಗಳ ಸಂಗಮ ಈ ಶರಧಿ, ಎಲ್ಲೆಲ್ಲೋ ಒಂಟಿಯಾಗಿ ಹರಿದ ನದಿಗಳು ತಮ್ಮತನ ಕಳೆದುಕೊಂಡು ಕೂಡುವ ಸಂಗಮಬಿಂದು ಇದು. ಅವನ ಹೆಜ್ಜೆ ಗುರುತು ಸೆಳೆದೊಯ್ಯುವ ಅಲೆಗಳೇ ಇವಳ ಕಾಲಡಿ ನುಸುಳುತ್ತವೆ. ಸೂರ್ಯ ತಂಪಾಗುವಾಗ ಬೀಸುವ ಗಾಳಿಯೇ ಇವರಿಬ್ಬರನ್ನು ಸವರಿ ಹೋಗುತ್ತದೆ. ಸಂಗಮ ತಂತಾನೆ ಸಂಭವಿಸುತ್ತೆ. ನಾನು ಇಲ್ಲಿ ಕಥೆ ಕಟ್ಟುತ್ತಿಲ್ಲ, ಅದು ಘಟಿಸುತ್ತದೆ.


ಆತನ ಕೈಲಿದ್ದ ಚಾಲ್ರ್ಸ ಬೋದಿಲೇರ್ನ ಪುಸ್ತಕ ಅವಳ ಕಣ್ಣಿಗೆ ಬಿದ್ದು ಆತನ ಬಗ್ಗೆ ಕುತೂಹಲ ಮೂಡಿಸುತ್ತೆ. (ಪುಸ್ತಕವಲ್ಲ ಅವಳ ಸೆಳೆದದ್ದು. ಮನಸೊಳಗಿನ ಸತ್ಯದ ಹುಡುಕಾಟದ ತುಡಿತ.) ಬೋದಿಲೇರ್ ಒಂಟಿಯಾಗಿಯೇ ಬದುಕನ್ನು ತೀವೃವಾಗಿ ಅನುಭವಿಸಿದವ ಅನ್ನುವ ಯೋಚನೆಯೇ ಇವಳನ್ನು ಅವನೆಡೆಗೆ ಸೆಳೆಯುತ್ತದೆ. ಮಾತು ಕುಡಿಯೊಡೆದು ಕವಲುದಾರಿಯ ತುದಿಯೆರಡು ಕೂಡಿಕೊಳ್ಳುತ್ತದೆ (?) ಆತ ಹೇಳುತ್ತಾನೆ ಹೆಣ್ಣು, ಹೆಂಡ, ಸಾಹಿತ್ಯ ಯಾವುದಾದರೂ ಸದಾ ಕುಡಿದ ಸ್ಥಿತಿಯಲ್ಲಿರಬೇಕು...
ಆತನ ಒಂಟಿತನದ ಹಿಂದಿರುವ, ಜೀವನವನ್ನು ತೀವ್ರವಾಗಿ ಅನುಭವಿಸುವ ತುಡಿತ ಈಕೆಗೆ ಮೆಚ್ಚಿಗೆಯಾಗುತ್ತದೆ. ಒಂಟಿತನದ ಬಯಕೆಯ 'ಆತ' ಒಂಟಿತನದ ಬಯಕೆಯ 'ಆಕೆ', ಇಬ್ಬರ ಯೋಚನೆಗಳು ಒಂದಾಗುತ್ತವೆ. ಈಗ 'ಆತ'ನ ಹೆಜ್ಜೆಯನ್ನು ಎಳೆದೊಯ್ಯುವ ಅಲೆಗೂ, 'ಈಕೆ'ಯ ಕಾಲಡಿ ನುಸುಳುವ ಅಲೆಗೂ ಒಂದೇ ಭಾವ ಸ್ಪುರಣೆ. ಅವರ ಯೋಚನೆಗಳಿಗೀಗ ಸಮುದ್ರದಾಳ. ಕಥೆಯೊಳಗಿನ ಪಾತ್ರಗಳು ಅವವೇ ತೆರೆದುಕೊಳ್ಳುತ್ತವೆ. ಅವುಗಳ ಮಾತಿನಲ್ಲೇ ಅವುಗಳ ಅನುಭವ ಕೇಳುವುದು ಒಳಿತು. ತಂತಾನೆ ತೆರೆದುಕೊಳ್ಳುವ ಅವುಗಳ ಮನದಾಳದ ಮಾತು, ಅನುಭವ ಕೇಳಿಸಿಕೊಳ್ಳಿ.
ಆತ...
ಬದುಕನ್ನು ತೀವ್ರವಾಗಿ ಅನುಭವಿಸಬೇಕು ಅನ್ನುವ ಹುಚ್ಚು ಇರುವ ನಾನು, ಅದಕ್ಕೆ ಆತುಕೊಂಡ ಒಂಟಿತನ, ಸಂಗಮದ ಸಮುದ್ರ. ಇದು ನನ್ನ ದಿನ ಸಂಜೆಯ ಸುತ್ತಾಟದ ಜಾಗೆ. ರಣಬಿಸಿಲಿನಲ್ಲಿಯೂ ಒಮ್ಮೊಮ್ಮೆ ಇಲ್ಲಿ ಬಂದು ಕುಳಿತಿದ್ದಿದೆ. ಹುಟ್ಟು ನನ್ನಲ್ಲಿ ಅನೇಕ ಪ್ರಶ್ನೆಗಳನ್ನೇಳಿಸುತ್ತದೆ. ನಾನು ಯಾಕೆ ಹುಟ್ಟಿದ್ದು? ಎಲ್ಲರಂತೆಯೇ ಬೆಳೆದು, ಹಣ ಗಳಿಸಿ ಮತ್ತೆಲ್ಲೋ ಸಾಯುವುದಷ್ಟೇ ಈ ಹುಟ್ಟಿಗೆ ಕಾರಣವೇ.? ಚಿಕ್ಕವನಿರುವಾಗಲೇ ಬದುಕ ಅನುಭವಿಸುವ ತುಡಿತದಿಂದ ಮನೆ ಬಿಟ್ಟವನು. ಎಲ್ಲೆಲ್ಲೋ ಅಲೆದೆ. ಗಂಗೆಯ ಮಡಿಲು, ಹಿಮಾಲಯದ ತಪ್ಪಲು, ರಾಶಿ ರಾಶಿ ಪುಸ್ತಕ. ಧೀರ್ಘ ಓದು, ಉದ್ದುದ್ದ ಗಡ್ಡದ ಸನ್ಯಾಸಿಗಳು, ಸುಧೀರ್ಘ ಧ್ಯಾನ, ಯೋಗ ಯಾವುದೂ ನನ್ನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ಕಡೆಗೆ ಈ ಸಮುದ್ರ ನನ್ನ ಪ್ರಶ್ನೆಗೆ ಪ್ರಶ್ನೆಯಾಗಿ ಕೆಲವೊಮ್ಮೆ ಉತ್ತರವಾಗಿ ಕಾಡಿದ್ದಿದೆ. ಈಗಲೂ ಕಾಡುತ್ತಿದೆ. ನಾನು ಒಂಟಿ ಆದರೂ ಮನದಲ್ಲಿಯ ಪ್ರಶ್ನೆ ನನಗೂ ಈ ಜಗತ್ತಿಗೂ ಏನು ಸಂಬಂಧ ಈ ಧ್ವಂದ್ವಗಳ ತೀವೃತೆಯ ತುಡಿತ ಸದಾ ನನ್ನ ಕಾಡುತ್ತದೆ. ದಿನಾ ಮುಳುಗುವ ಸೂರ್ಯ, ದಿನಾ ಹಾರುವ ಹಕ್ಕಿಗಳು, ನಾನೇ ದಿನವಿಡೀ ಕುಳಿತು ಸುಟ್ಟ ಸಿಗರೇಟು. ನನ್ನ ಪ್ರಶ್ನೆಗೆ ಉತ್ತರ ಶೂನ್ಯ .

ಹೆಣ್ಣು ನನ್ನ ಬದುಕಿನ ವಿಸ್ಮಯದ ಇನ್ನೊಂದು ಮಗ್ಗುಲು. ನನ್ನ ಪ್ರಶ್ನೆಗೆ ಉತ್ತರ ಇಲ್ಲಿ ಸಿಗಬಹುದು ಎನ್ನುವ ಕಾತರ ನನ್ನಲ್ಲಿ ಯಾವತ್ತೂ ಮೂಡಿರಲಿಲ್ಲ. ದಿನ ನಾನು ನಡೆದಾಡುವ ಈ ಶರದಿಯ ತೀರದಲ್ಲಿ ಹೆಣ್ಣು ಜೀವವೊಂದು ನನಗೆ ಎದುರಾದದ್ದು. ಆಕೆ ಕೂಡಾ ಒಂಟಿಯಂತೆ. ಆಕೆಗೂ ಒಂಟಿತನ ಇಷ್ಟವಂತೆ. ಅವಳಿಗೂ ಹುಟ್ಟಿನ ಪ್ರಶ್ನೆ ಕಾಡುತ್ತಂತೆ. ಒಂಟಿತನದ ಆಳದಲ್ಲಿಯ ಸಂಬಂಧದ ತುಡಿತ ಇಲ್ಲಿ ಬಿಚ್ಚಿಕೊಂಡಿತು. ಹಿಮಾಲಯದ ಸನ್ಯಾಸಿಯೊಬ್ಬ ಹೇಳಿದ್ದ 'ಸ್ತ್ರೀ' ನಿನ್ನಲ್ಲಿಯ ಪ್ರಶ್ನೆಗಳಿಗೆ ಉತ್ತರ. ನಾನು ನಕ್ಕಿದ್ದೆ.

ಕೊನೆಗೂ ಬಂದೇ ಬಂದಳು. ಮೊದಲಾದದ್ದು ನಮ್ಮಿಬ್ಬರ ನಡುವಿನ ಯೋಚನೆಗಳ ಮಿಲನ. ಇಬ್ಬರ ಅನ್ವೇಷಣೆಯ ಜಾಡು ಒಂದೇ ಆಗಿತ್ತು. ನನ್ನ ಜೀವನ ಅನುಭವಿಸುವ ತೀವ್ರತೆ ಆಕೆಯ ಮನಸ್ಸಿನಾಳದ ತೀವೃತೆಗೆ ಹೊಂದಿಕೊಂಡಿತ್ತು. ದಿನವೂ ನಮ್ಮಿಬ್ಬರ ಮಾತುಗಳು ಆಲೋಚನೆಗಳು ತೀವ್ರವಾಗಿ ಒಂದನ್ನೊಂದು ಹೊಂದುತ್ತಿದ್ದವು. ನಾನು ಒಂಟಿ ಎಂದುಕೊಡಿದ್ದೆ ಈಗ ಅಶ್ಚರ್ಯವಾಗುತ್ತಿತ್ತು. ತಾಯ ಯೋನಿಯಿಂದ ಹೊರಬಂದ ನನಗೆ ಅದರ ಅನುಭವ ಮರೆತಿದೆ. ಎದೆಹಾಲು ಕುಡಿದ ಸಂತೋಷ ಮರೆತಿದೆ. ಅದ್ಯಾಕೋ ನನ್ನಲ್ಲಿ ಇವಳ ಕಂಡಾಕ್ಷಣ ನನ್ನಲ್ಲಿ ತಾಯ ನೆನಪು, ಹುಟ್ಟಿನ ಪ್ರಶ್ನೆ, ಆ ಹಿಮಾಲಯದ ಸನ್ಯಾಸಿ ಹೇಳಿದ ಮಾತು ಎಲ್ಲ ಮತ್ತೆ ಮತ್ತೆ ನೆನಪಾಗತೊಡಗಿತ್ತು.

ಈಕೆಯ ಕೈ ಸೋಕಿದರೆ ನಾನು ಸಮ್ಮೋಹಿತನಾಗುತ್ತಿದ್ದೆ. ನನ್ನಲ್ಲಿ ಸಂತಸ ಉಕ್ಕುತ್ತಿತ್ತು. ಯೋಚನೆಗಳ ಸಂಗಮದಲ್ಲಿ ಅಮಿತಾನಂದದ ಖುಷಿಯಿತ್ತು. ಒಮ್ಮೆ ಈಕೆ ಕಾಳಿದಾಸನ ಶಾಕುಂತಲೆ ಓದುತ್ತಿದ್ದಳು
ಹಸ್ತಂ ಕಂಪಯತೇ ರುಣದ್ಧಿ ರಶನವ್ಯಾಪಾರ ಲೋಲಾಂಗುಲಿ:
ಸ್ವಾಹಸ್ತಾ ನಯತಿ ಸ್ತನಾವರಣ ತಾಮಾಲಿಂಗ್ಯಮಾನಾ ಬಲಾಕ್ /
ಪಾತುಂ ಪಕ್ಷಲ ನೇತ್ರಮುನ್ನ ಮಯತ:
ನಾಚಿಕರೋತ್ಯಾನನಂವ್ಯಾಜೇ ನಾಪ್ಯಭಿಲಾಷ ಪೂರಣ ಸುಖಂ ನಿರ್ವರ್ತಯತ್ಯೇವ ಮೇ //
ಅದ್ಯಾಕೆ ಈ ಸಾಲುಗಳಲ್ಲಿ ನಾನವಳ ಕಲ್ಪಿಸಿಕೊಂಡೆನೋ ? ಪ್ರತಿ ಸಾಲೂ ಅವಳ ಭಾವ ಬಿನ್ನಾಣಗಳ ಸ್ಫುರಣವಾಗಿತ್ತು.

ನಾನು ಕಳೆದು ಹೋಗುತ್ತೆನೆ ಎಲ್ಲೆಡೆ ಅವಳದೇ ರೂಪ. ಕಣ್ಭಿಟ್ಟಾಗ, ಕಣ್ಣುಚ್ಚಿದಾಗ, ನಿದ್ರೆಯಲ್ಲಿದ್ದಾಗ ನಗುವಾಗ ಅಳುವಾಗ ಎಲ್ಲೆಡೆ ಅವಳದೇ ರೂಪ. ಮನಸ್ಸನ್ನು ಏಕಾಗ್ರಗೊಳಿಸುವ ರೂಪ. ಮನಸ್ಸನ್ನು ನಿಯಂತ್ರಿಸುವ ಮಾಯೆ , ದೇಹದ ಚಲನೆಗೆ ಕಾರಣವಾಗುವ ಛಾಯೆ ಎಲ್ಲ ಅವಳೇ. ಆಕೆ ಶೂನ್ಯ. ಮನಸೊಳಗಿನ ಸಮಾಧಿ ಭಾವ. ಆಕೆ ಧ್ಯಾನಸ್ಥ ಸಹಸ್ರ ದಳ ಕಮಲ. ಆಕೆ ಕುಂಡಲಿನಿ. ನಾನು ಮಾತನಾಡಿದರೆ ಆಕೆ ಧ್ಯಾನಸ್ಥೆ. ನನ್ನ ಪ್ರತಿ ಮಾತು ಅವಳಾತ್ಮದ್ದು. ಅವಳ ಪ್ರತಿ ಚಲನೆ ನನ್ನದು. ಅದ್ಯಾಕೆ ಇಂತಹ ಸೆಳೆತ ಸಂಬಂಧ (?)

ಇದೇ ಸಮುದ್ರ ಅವತ್ತು ಉಕ್ಕುಕ್ಕಿ ಹರಿಯುತ್ತಿತ್ತು. ಹೆಜ್ಜೆಯಡಿ ನುಸುಳಿ, ಹೆಜ್ಜೆ ಗುರುತನ್ನು ಸೆಳೆದು ಬೋರೆನ್ನುತ್ತಿತ್ತು. ಅದ್ಯಾವ ಗಳಿಗೆಯೋ ಅದ್ಯಾವ ಮಾಯೆಯೋ, ತತ್ವ ಮಿಲನ, ಅತ್ಮ ಮಿಲನ ಅಭೌತಿಕ ಮಿಲನಗಳ ತಾಕಲಾಟಗಳೆಲ್ಲ ಮುಗಿದಾಗ ದೈಹಿಕವಾಗಿ ಅವಳನ್ನು ಆವತ್ತು ನಾನು ಆವರಿಸಿಕೊಂಡಿದ್ದೆ. ಕೈ ಸೋಕಿದರೆ ಸಮ್ಮೋಹಿತವಾಗುತ್ತದ್ದ ನನ್ನಾತ್ಮ ಆವತ್ತು ಅನುಭವಿಸಿದ ಆನಂದ ಅವರ್ಣನೀಯ. ದೇಹದ ನರ ನಾಡಿಗಳೆಲ್ಲ ಒಮ್ಮೆಲೆ ಚಿಗಿತು ಸಪ್ತ ಚಕ್ರದ ಮೂಲ ಮೂಲಾದಾರದಿಂದ ಹೊರಟ ಬೆಳಕೊಂದು ಸಹಸ್ರಾರ ದಳದಲ್ಲಿ ವಿಲಿನವಾಯ್ತು. ದೇಹದ ಸ್ಫರ್ಶ ಸುಖ ಅನುಭವಿಸಿದಂತೆ ನಾನು ಮಗುವಾಗುತ್ತಿದ್ದೇನೆ. ನನ್ನೊಳಗಿನ ಬಾಲ್ಯ ಮತ್ತೆ ಚಿಗುರುತ್ತಿದೆ. ಕಳೆದುಕೊಂಡ ಬಾಲ್ಯದಲ್ಲಿ ನಾನು ಹುಡುಕಿ ಸೋತ ತಾಯ ತೆಕ್ಕೆ ಮತ್ತೆ ನನಗೆ ಸಿಕ್ಕಿದೆ. ಆ ಕ್ಷಣ ನನ್ನ ಹುಟ್ಟಿನ ಅರಿವು ಧೀರ್ಘವಾದಂತೆನಿಸುತ್ತಿತ್ತು. ನಾನು ಹೀಗೆ ತೋಳ್ತೆಕ್ಕೆಯಲ್ಲಿ ಸ್ತನಾಗ್ರಗಳ ಮಧ್ಯೆ ಕಳೆದು ಹೋಗಬೇಕು. ಆ ಅಪ್ಪುಗೆ ಮೃದುವಿನಲ್ಲಿ, ಅವಳ ಹೆರಳ ಹರಿದಾಟದಲ್ಲಿ ನನ್ನ ತಾಯಿ ಅಡಗಿದ್ದಾಳೆ. ಈ ಸುಖ ಈ ಬಾಲ್ಯ ಹೀಗೆ ಇರಲಿ. ಕಣ್ತೆರಯದೇ ನಾನು ಆ ತಾಯ(?) ಸ್ಪರ್ಷ ಸುಖ ಅನುಭವಿಸುತ್ತಿದ್ದೆನೆ. ನನಗೆ ಅಪರಿಚಿತವಾದ ಆ ಅಪ್ಪುಗೆ, ಆ ಮೃದು, ನನ್ನೆಲ್ಲ ಪ್ರಶ್ನೆಗಳಿಗೆ ಇಲ್ಲೇ ಎಲ್ಲೋ ಉತ್ತರವಿದೆ. ನನ್ನನ್ನು ಆಗಾಗ ಕಾಡುತ್ತಿದ್ದ ಕನಸು, ಬೆನ್ನಟ್ಟಿ ಬರುತ್ತಿದ್ದ ಹಾವು, ತಪ್ಪಿಸಿಕೊಂಡು ಹಾರಿಹೋಗುತ್ತಿದ್ದ ನಾನು. ಈಗ ಹಾಗಿಲ್ಲ ಹಾವು ಕನಸಿನಲ್ಲಿ ಕಾಣುತ್ತಿಲ್ಲ.


ಎಷ್ಟೋ ವರ್ಷಗಳಿಂದ ಈ ಅಪ್ಪುಗೆ ಈ ಸುಖಕ್ಕಾಗಿ ಕಾತರಿಸುತ್ತಿದ್ದೆನೇನೋ ಎಂಬಂತೆ ಮುಕುರಿಕೊಂಡಿದ್ದೆ ನಾನು. ಹಿತವಾದ ನರಳಿಕೆ, ಅರೆತೆರದ ಕಣ್ಣು, ತೃಪ್ತನಾಗದ ಮನಸು ಹಾತೊರೆಯುತ್ತಿತ್ತು. ಇದು ದೇಹ ವಾಂಛೆಯಲ್ಲ ಮನೋ ವಾಂಛೆ. ಈಗಿತ್ತು ಈಗಿಲ್ಲ ಎಂಬಂತಹ ದಾಹ ಅಲ್ಲವೇ ಅಲ್ಲ. ನಾನು ಕಳೆದು ಹೋಗಬೇಕು, ಮಗುವಾಗಬೇಕು. ನೀನು ತಾಯಾಗುತ್ತಿಯಾ? ಮುಗ್ಧ ಆವೇಶದ ಪ್ರಶ್ನೆಗೆ ಆಕೆಯದು ಸ್ನಿಗ್ಧ ನಗುವಿನ ಉತ್ತರ. ಮತ್ತದೇ ಸನ್ಯಾಸಿ ನೆನಪಾಗುತ್ತಾನೆ. ಅವನು ಹೇಳಿದ ಸತ್ಯದ ಅರಿವು ತಿಳಿತಿಳಿಯಾಗಿ ಮನಸಲ್ಲಿ ಮೂಡಿಕೊಳ್ಳುತ್ತದೆ. ನನಗನಿಸಿದ್ದು ಹೆಣ್ಣಿನ ಸಾಂಗತ್ಯದಲ್ಲಿರುವುದು ಕಾಮವಲ್ಲ. ಅದು ಹುಟ್ಟಿನ ಮೂಲವನ್ನು ಹುಡುಕುವ ತವಕ. ಹೆಣ್ಣಿಗೆ ಇದರ ಸಂಪೂರ್ಣ ಅರಿವಿರುತ್ತದೆ. ಗರ್ಭದರಿಸುವ ಹೆಣ್ಣು ಹುಟ್ಟನ್ನು ಅನುಭವಿಸುತ್ತಾಳೆ. ಗಂಡು ಎನಿಸಿಕೊಂಡವನು ಮಿಲನದ ದಾರಿ ಹುಡುಕಿಕೊಳ್ಳುತ್ತಾನೆ. ಏನೂ ಇರದಿಹ (?) ಹೆಣ್ಣಿನ ದೇಹದ ಮೂಲೆ ಮೂಲೆಯನ್ನು ತಡಕಾಡುತ್ತಾನೆ. ತನ್ನ ಹುಟ್ಟಿನ ಮೂಲವೆಲ್ಲಿದೆ ಹುಡುಕಾಡುತ್ತಾನೆ. ಅದಕ್ಕೆ ಮಿಲನ ಗಂಡಿನಲ್ಲಿ ಪದೇ ಪದೇ ಕುತೂಹಲ ಮೂಡಿಸುತ್ತೆ. ಹೆಣ್ಣಿನ ದೇಹದ ಮೂಲೆ ಮೂಲೆ ಏನೋ ಇದೆ ಎಂಬ ತಹತಹ ಮೂಡಿಸುತ್ತೆ. ನಾನು ಅಂದುಕೊಳ್ಳುತ್ತೇನೆ ನಡೆದಿಹ ಘಟನೆಗೆ ಕಾಮ ಕಾರಣವಲ್ಲ (?) ಇದು ತಾಯ ತೆಕ್ಕೆಯ ಜನ್ಮರಹಸ್ಯದ ಹುಡುಕಾಟದಲ್ಲಿ ನನ್ನ ಮೊದಲ ಹೆಜ್ಜೆ.

ಸೂರ್ಯ ಜಾರಿದ ಸಮುದ್ರದ ಕಾಂಡ್ಲಾಗಿಡದ ಬದಿಯಲ್ಲಿ ತೆಕ್ಕೆ ಬಿದ್ದ ಹಾವುಗಳು ತೆಕ್ಕೆ ಸಡಿಲಿಸಿ ದೂರಾಗುತ್ತಿದ್ದವು. ಕಣ್ಬಿಟ್ಟೆ ಪ್ರಪಂಚ ಹೊಸತಿತ್ತು. ಇದೇ ಸಮುದ್ರದಂಡೆ ದಿನ ಕಂಡಹಾಗೆನ್ನಿಸುತ್ತಿರಲಿಲ್ಲ. ಸೂರ್ಯನ ಕಿರಣಗಳಲ್ಲೇನೋ ಹೊಸತನವಿತ್ತು. ನಾನು ಮಗುವಾಗಿದ್ದೆ...! ನಿರಸ ಪ್ರಪಂಚದ ನರನಾಡಿಗಳಲ್ಲೆಲ್ಲ ಹೊಸತನದ ಹರಿವು. ಕಳೆದು ಹೋಗಿದ್ದ ಕಣ್ಣ ಹೊಳಪು ಮರಳಿತ್ತು, ನಾನು ಪ್ರತಿಯೊಂದನ್ನು ವಿಸ್ಮಯದಿಂದ ನೋಡುತ್ತಿದ್ದೆ.

ಆಕೆ...
ಅದ್ಯಾಕೆ ನನ್ನ ಮನದಲ್ಲಿ ಇಂತಹ ಪರಿವರ್ತನೆ? ಒಂಟಿತನದ ಬಯಕೆಯ ಮನಸಲ್ಲೇಕೆ ಇಂತಹ ಸಂಬಂಧದ ಕಲ್ಪನೆ ಯೋಚನೆ.? ನಮ್ಮಿಬ್ಬರ ಮಧ್ಯೆ ಸಂಬಂಧವಿಳಿಸಿದ ಬೆಡಗು ಯಾವುದು..? ವಿಜ್ಞಾನಿಗಳ ಕಲ್ಪನೆಯಂತೆ(?) ಬರೀ ರಾಸಾಯನಿಕ ತಾಕಲಾಟವಲ್ಲ ಇದು. ಯಾವ ಆಸನ, ಯೋಗ, ಧ್ಯಾನಗಳೂ ತಿಳಿಸದಂತಹ ಸತ್ಯ ಅವನ ಸಂಗಮದಲ್ಲಿದೆ ಅಂತೆಕೆ ಅನಿಸುತ್ತಿದೆ? ಆತನ ನೋಡಿದೊಡನೆ ಮನಸೇಕೆ ಕುಣಿಯುವ ಅಲೆಯಂತಾಗುತ್ತದೆ? ನಾನೇಕೆ ಕೃಷ್ಣನ ಹಿಂದೆ ಬಿದ್ದ ಮೀರಳಂತಾಡುತ್ತೆನೆ ? ನನ್ನ ಹುಡುಕಾಟಕ್ಕೆ, ನನ್ನೆಲ್ಲ ಪ್ರಶನ್ನೆಗಳಿಗೆ ಉತ್ತರದಂತೆ ಈತ ಏಕೆ ಗೋಚರಿಸುತ್ತಾನೆ.? ಆ ಜೋಪಡಿಯ ಸನ್ಯಾಸಿನಿ ಹೇಳಿದಂತೆ ಸತ್ಯದ ಅರಿವು ಸಂಗಮದಲ್ಲಿದೆಯೋ? ಅದ್ಯಾಕೆ ಆತನ ಮಾತುಗಳಿಗೆ ನಾನು ಧ್ಯಾನಸ್ಥೆಯಾಗುತ್ತೇನೆ? ಯಾವುದೋ ವಿಲಾಸದಲ್ಲಿ ಯಾವುದೋ ಯೋಚನೆ. ಹಾರುವ ಚಿಟ್ಟೆ ಕಂಡರೂ ಹರಿಯುವ ಇರುವೆ ಕಂಡರೂ ಕಣ್ಣರಳಿಸಿ ನಿಂತು ಬಿಡುವ ನನಗೇಕೆ ಎಲ್ಲೆಡೆ ಆತನೆ ಕಾಣುತ್ತಾನೆ?

ಮನ್ಮನಾ ಭವ ಮದ್ಭಕ್ತೋ ಮದ್ಯಾಜೀ ಮಾಂ ನಮಸ್ಕುರು/
ಮಾ ಮೇ ವೈಷ್ಯಸಿ ಯುಕ್ತೈವ ಮಾತ್ಮಾನಂ ಮತ್ಪರಾಯಣ: /
ಆತ ಭಗವದ್ಗೀತೆಯ ಈ ಸಾಲುಗಳನ್ನು ಓದಿದಾಗ ನಾನೇಕೆ ಆತನಲ್ಲೇ ಮನಸ್ಸಿಡುತ್ತೆನೆ? ಆತ ಏಕೆ ನನಗೆ ವಿಶ್ವ ರೂಪ ದರ್ಶನದ ಕೃಷ್ಣನಂತೆನಿಸುತ್ತಾನೆ..?

ಬಸೋ ಮೇರೆ ನೈನಮೆ ನಂದಲಾಲ/
ಮೋಹಿನಿ ಮೂರತ ಸಾವಲಿ ಸೂರತ ನೈನಾ ಬನೇ ವಿಶಾಲ/
ಕಣ್ಣಿಗೆ ತುಂಬಿಕೊಂಡ ಆತನ ಬಿಂಬ ನನ್ನೆದೆಯ, ನನ್ನರಿವಿನ ಆಳವನ್ನು ಹೆಚ್ಚಿಸಿದೆ. ನಾನೀಗ ಕೃಷ್ಣನ ಮೂತರ್ಿ ಕಣ್ಣೊಳಗೆ ತುಂಬಿಕೊಂಡ ಮೀರಾ. ನನ್ನೆದೆಯ ಯೋಚನೆಗಳಿಗೆಲ್ಲ ಅವನು ಮೂರ್ತರೂಪ . ಅಭೌತಿಕ, ಆಧ್ಯಾತ್ಮ ಸ್ತರಕ್ಕೆ ಆತ ಸನ್ನೆಕೋಲು. ಆತ ಗಿರಿಧರ ನಾನು ಆತನ ಮೀರಾ. ನನ್ನ ಜನ್ಮ ರಹಸ್ಯ ಅವನ ಸಂಗಮದಲ್ಲಿದೆ.
ಗಿರಿಧರ ಆಗೆ ನಾಚೂಂಗಿ ನಾಚ ನಾಚ ಪಿವ ರಸಿಕ ರಿಜಾವೋ
ಭಕ್ತ ಜನಕೋ ಜಾವೂಂಗೀ/
ಪ್ರೇಮ ಪ್ರೀತಿಕೆ ಬಂಧ ಗುಂಘುರುಸುರತಕಿ ಕಂಚನಿ ಕಾಚೂಂಗಿ//

ಆವತ್ತು ಸಂಗಮದ ಸಮುದ್ರ ಉಕ್ಕುಕ್ಕಿ ಹರಿಯುತ್ತಿತ್ತು. ಆತ ಹತ್ತಿರ ಸರಿದು ಕುಳಿತಾಗ ನಾನು ಭಾವೋದ್ವೇಗಕ್ಕೊಳಗಾದೆ. ಒಂದೇ ಆತ್ಮದ ಎರಡು ದೇಹಗಳು ಮತ್ತೆ ಒಂದೇ ದೇಹವಾಗುವ ತವಕ ವ್ಯಕ್ತಪಡಿಸದವು. ನನ್ನ ಗಭರ್ಾಶಯದಲ್ಲೇಲ್ಲೋ ಹುಟ್ಟಿನ ಚಕ್ರ ಸುರುಳಿಯಾಕಾರದಲ್ಲಿ ಸುತ್ತಿ ಸುಳಿದಂತೆ ನಾನು ಸಂಪೂರ್ಣ ಧ್ಯಾನಸ್ಥೆ. ಮೂಲಾದಾರದ ಬೆಳಕು ಸಹಸ್ರಾರಕ್ಕೆ. ನನ್ನ ಇಷ್ಟು ವರ್ಷದ ಯೋಗ, ಯೋಚನೆಗಳು ಸಾಧಿಸದ ಸಂಪರ್ಕ ಕ್ಷಣ ಮಾತ್ರದಲ್ಲಿ ಘಟಿಸಿಹೋಯ್ತು. ಹುಟ್ಟಿನ ತಿಳಿವು ವಿಸ್ತಾರವಾಯ್ತು. ಕುತೂಹಲಕರ ಬಾಲ್ಯ, ಸಾವಿನ ವಿಸ್ಮಯದ ಪ್ರಶ್ನೆಗಳಿಗೆಲ್ಲ ಉತ್ತರ ಎರಡು ಆತ್ಮಗಳ ಸಮ್ಮಿಳನ. ದೇಹವು, ತ್ಯಜಿಸಿ ಹೋದ ಆತ್ಮದ ಬಟ್ಟೆಯೆಂದೆನಿಸುತ್ತಿತ್ತು. ನನ್ನ ಕೃಷ್ಣ ನನ್ನೊಳಗೆ ಹುಟ್ಟಿ ಬರುತ್ತಾನೆ. ನಾನು ಹುಟ್ಟುವಿಕೆಗೆ ಸಾಕ್ಷಿಯಾಗುತ್ತೆನೆ. ಸಹಸ್ರ ದಳ ಕಮಲ ಭೂಮದ್ಯದಲ್ಲಿ ನಿಶ್ಚಿತ ಬೆಳಕಿನಲ್ಲಿ ಕಾಣುತ್ತಿದೆ. ಬದುಕು ಪ್ರಶ್ನೆ ಕಳೆದುಕೊಂಡ ನಿವರ್ಾತ ಶೂನ್ಯವಾಗಿತ್ತು. ಗಮನಿಸಿದೆ ಮನಸು ಕಾಲಿಹಾಳೆ ಎನಿಸುತ್ತಿತ್ತು. ಬೇಡಿಕೊಂಡೆ ಕೃಷ್ಣಾ ಈ ಸುಖ ಅನುಭವಿಸುವ ಶಕ್ತಿ ಕೊಡು.

ಆತ..
ನಾನು ಹುಟ್ಟಿದ್ದು ಸಾರ್ಥಕವಾಯ್ತು. ನನ್ನೊಳಗೆ ಈಗ ಪ್ರಶ್ನೆಗಳಿಲ್ಲ. ಅರಿಷಡ್ವರ್ಗಗಳ ತಾಕಲಾಟಗಳು ಈ ಆತ್ಮಕ್ಕಿಲ್ಲ..? ನಾನು ಈಗ ಲೌಕಿಕವನ್ನು ಗೆದ್ದ ಶಂಕರಾಚಾರ್ಯ. ನಾನು ಈಗ ಏನೂ ಇಲ್ಲದ ಶೂನ್ಯ. ಹಲವು ನದಿಗಳ ಸಂಗಮ ಸಮುದ್ರದ ಆಳದಲ್ಲಿರುವ ನಿರಾಳತೆ, ನಿರವ ಮೌನ ನನಗೆ ದಕ್ಕಿದೆ. ನಾನೀಗ ಆಗಷ್ಟೆ ಗರ್ಭದಿಂದ ಹೊರಬಂದ ಮಗು. ನನಗೆಲ್ಲ ಹೊಸತು. ನಾನು ಕಣ್ಣರಳಿಸಿ ಪ್ರಪಂಚ ನೋಡಬಲ್ಲೆ. ನಾನೀಗ ಒಂಟಿ!

ಆಕೆ...
ನಾನೀಗ ಬೇಕೆಂದಾಗ ಧ್ಯಾನಸ್ಥೆ. ನಾನೀಗ ಪ್ರಪಂಚದ ಸಮಸ್ತ ತಿಳಿವು ತುಂಬಿರುವ ಶೂನ್ಯ..? ಸಹಸ್ರ ನದಿಗಳ ಹುದುಗಿಸಿಕೊಂಡ ಸಮುದ್ರದ ಆಳದ ಅರಿವು, ಅಲೆಗಳ ಭಾಷೆಯ ತಿಳಿವು ನನಗಿದೆ. ನಾಗೀಗ ಒಂಟಿ..!

ನನ್ನ ಕಥೆಯ ಪಾತ್ರಗಳ ಪ್ರಶ್ನೆಗಳಿಗೆ ಉತ್ತ್ರರ ದೊರಕಿದೆ. ಮತ್ತದೇ ಕಡಲ ಅಲೆಗಳು ಅವನ ಹೆಜ್ಜೆ ಗುರುತ ಸೆಳೆದೊಯ್ಯ ಬರುತ್ತವೆ. ಅವನ ಹೆಜ್ಜೆ ಅಲೆಯಾಗಿ ಅವುಗಳೊಡನೆ ಸೇರಿಕೊಳ್ಳುತ್ತದೆ. ಅವಳ ಕಾಲಡಿ ನುಸುಳುವ ಅಲೆಗಳಿಗೆ ಶರಧಿಯಾಳದ ಅನುಭವವಾಗುತ್ತೆ. ದಿನ ಅವರಿಬ್ಬರೂ ಅದೇ ದಡ(?)ದಲ್ಲಿ ನಡೆದಾಡುತ್ತಾರೆ. ಎಲ್ಲ ನದಿಗಳ ಸಂಗಮದ ಆಳ ಸಮುದ್ರದಲ್ಲಿಯ ಶೂನ್ಯದಂತೆ ಮೌನವಾಗಿ .

(ಕನ್ನಡ ಪ್ರಭದಲ್ಲಿ ಪ್ರಕಟವಾದದ್ದು )

Wednesday, April 8, 2009

ನಾನು ನೀನು ಜೋಡಿ






ಸೂಚನೆ : ಮೊಬೈಲ್ ಕ್ಯಾಮೆರಾದಲ್ಲಿ ತೆಗೆದದ್ದು.




Monday, March 23, 2009

ಸರ್ಕಸ್


ಸಣ್ಣ ವೃತ್ತದೊಳಗೆ ದೇಹ ಕುಗ್ಗಿಸಿ

ಜೊತೆಗೆ ತನ್ನ ಸಣ್ಣ ತಮ್ಮನನ್ನು ಸೇರಿಸಿ

ದಾರಿಯಲ್ಲಿ ದೀಪ ಕೆಂಪು ತೋರಿದಾಗಲೆಲ್ಲಾ

ಕಸರತ್ತು ಮಾಡುವ ಪುಟ್ಟ ಹುಡುಗಿಯ ಕಣ್ಣಲ್ಲಿ

ಬದುಕು ಸರ್ಕಸ್ ಮಾಡುತ್ತೆ.

ಕೈಗೆಟುಕದ ಬಸ್ಸಿಸ ಕಿಡಕಿ ತಡವಿ

ಮುಖ ಸಣ್ಣದು ಮಾಡಿ ಬೇಡುತ್ತಾಳೆ

ಹಣವನ್ನೋ ಬದುಕನ್ನೋ ?

ಹಸಿರು ದೀಪ ಕಾಣುವ ಮುನ್ನ ಇನ್ನಷ್ಟು ಕಸರತ್ತು

ಕತ್ತು ಬಗ್ಗಿಸಿ ನೆಲಕ್ಕೆ ತಾಕಿಸಿ ಒಂದೆರಡು ಬಾರಿ ಹಾರಿ

ಕಣ್ಮುಚ್ಚಿ ಬಿಡುವುದರೊಳಗಾಗಿ ಹತ್ತಿರದ ಕಾರು ಕಿಡಕಿಯತ್ತ ಬರುತ್ತಾಳೆ.

ಬೇಡುತ್ತಾಳೆ ಬದುಕನ್ನೋ ಹಣವನ್ನೋ ?

ಸೊಂಟದಲ್ಲಿರುವ ತನ್ನ ತಮ್ಮನ ತಾಯಿ ಯಾರೋ ?

ತನ್ನೊಳಗೆ ಹರಿಯುವ ರಕ್ತ ಯಾರದ್ದೋ?

ನನ್ನ ಕಂಡು ಹಲ್ಗಿಂಜುವ ಕಾರೊಳಗಿನ ಮನುಷ್ಯನ ಮನಸ್ಸೆಂತದ್ದೋ ?

ಸಣ್ಣ ಕಬ್ಬಿಣದ ವೃತ್ತದೊಳಗೆ ತನ್ನ ತಮ್ಮನನ್ನು ಸೇರಿಸಿ ತೂರಿಕೊಳ್ಳುವಾಗೆಲ್ಲಾ

ಅವಳ ಕಣ್ಣಲ್ಲಿ ಪ್ರಶ್ನೆಗಳ ಬದುಕು ಸರ್ಕಸ್ ಮಾಡುತ್ತೆ.

ಹಸಿರು ದೀಪಕ್ಕೆ ಎಲ್ಲ ಮುಂದೋದಾಗ ಕೆಂಪು ದೀಪಕ್ಕೆ ಅವಳು ಕಾಯುತ್ತಾಳೆ.
ಸೂಚನೆ: ಛಾಯಾಚಿತ್ರ ಅಂತರ್ಜಾಲದ್ದು.

Sunday, March 22, 2009

ಗೋಲ್ ಗುಂಬಜ್





ಸೂಚನೆ: ಗುಂಬಜ್ ಮೇಲೇರಿದಾಗ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದ ಛಾಯಾಚಿತ್ರ. (21 ಮಾರ್ಚ್ 09)

Friday, February 6, 2009

ಮೊಬೈಲ್ ಕ್ಯಾಮೆರಾದಲ್ಲಿ ಭಾವಚಿತ್ರ







Sunday, January 18, 2009

ಸ್ವರ್ಗದ ಮೆಟ್ಟಿಲು











ಮನೆಯ ಮೆಟ್ಟಿಲು ಮೊಬೈಲ್ ಕ್ಯಾಮೆರಾ ಕಣ್ಣಿಗೆ ಕಂಡಂತೆ.




Wednesday, November 19, 2008

ಲಹರಿ


ಬರೀ ರಾಗದ ಸುತ್ತಲೇ ಸುತ್ತುವ ನನ್ನ ಕಲ್ಪನೆಗಳಿಗೆಲ್ಲ ಗೀಳು ರೋಗ ಅಂಟಿಸಿದ ದೇವತೆ ನಗುತ್ತಾಳೆ. ಮರೆತು ಬಿಡುತ್ತೇನೆ ನಾನು, ಸುತ್ತ ಮುತ್ತಲಿರುವ ವಾಸನೆಯನ್ನು ಇಂದ್ರೀಯ ಸುಮ್ಮನೆ ಹಿಂದಕ್ಕಟ್ಟುವಂತೆ ನಾನು ಚಟುವಟಿಕೆಯ ಎಲ್ಲ ಶಬ್ಧಗಳನ್ನು ಹಿಂದಕ್ಕಟ್ಟಿಬಿಡುತ್ತೇನೆ. ಕಿವಿಯೊಳಗೆ ಆ ರಾಗದ ಗುಂಗು ತಣ್ಣಗೆ ಹರಿಯುತ್ತಿರುತ್ತದೆ. ಮರೆತು ಹೋದ ನನ್ನ ಅಜ್ಜಿಯ ಮಡಿಲ ಸುಖದ ಅನುಭವವಾಗುತ್ತದೆ. ಇತ್ತೀಚೆಗೆ ನಾನು ಮಾತನಾಡುವುದ ಬಿಟ್ಟಿದ್ದೇನೆ. ಮಾತಿಗಿಲ್ಲದ ಅರ್ಥ ಯಾವುದೋ ಮನದಲ್ಲಿ ಹೊಳೆದಂತಾಗುತ್ತದೆ. ಮಾತು ನನಗರಿವಿಲ್ಲದೆ ಮೌನದತ್ತ ವಾಲುವ ಪರಿಯ ಕಂಡಾಗೆಲ್ಲ ನಾನು ಹೂ ಬಿಟ್ಟ ಮುಳ್ಳು ಗಿಡವನ್ನು ನೋಡುತ್ತೇನೆ.


ಯಾವ ಘಟನೆಯೂ ಇತ್ತೀಚೆಗೆ ಮನಸ ಸೆಳೆಯುತ್ತಿಲ್ಲ.ರಾಗ ಆಲಾಪದ ಆ ಭಾವನೆಗೆ ಮನಸ್ಸ ಲಯವನ್ನು ಹೊಂದಿಸಿಕೊಳ್ಳುವುದರಲ್ಲಿಯೇ ನಾನು ಕಳೆದು ಹೋಗುತ್ತೇನೆ. ಕಳೆದು ಹೋಗುವುದೆಂದರೆ ಸಾಮಾನ್ಯ ಕಳೆದುಹೋಗುವಿಕೆಯಲ್ಲ ಏನು ಇಲ್ಲದ ನಿರ್ವಾತ ಏಕಾಂತದಲ್ಲಿರುವಂತೆ ನಾನು ಗದ್ದಲದ ಗಡಿಬಿಡಿಯ ಪಟ್ಟಣದ ನಡುವೆ ಇರುತ್ತೇನೆ. ಯಾಕಿದು ? ಮೂರ್ತ ರೂಪದ ಕಲ್ಪನೆಯನ್ನೆಲ್ಲ ಬಿಟ್ಟು, ಕಣ್ಮುಚ್ಚಿದಾಗ 'ನಾದದ ಲಹರಿ' ಕಾಣುವುದೆಂದರೆ? ಮೂರ್ತಿ ಎದುರಿಗಿಟ್ಟು ಒಲಿಸಿಕೊಳ್ಳುವ ಸನ್ಯಾಸಿಗಳೆದುರು ನಿಂತು 'ನಾದ' ಕಾಣುತ್ತದೆ ಎಂದರೆ !


ಕಣ್ಣ ಬಿಂಬದಲ್ಲೆಲ್ಲ ತುಂಬಿ ತುಳುಕುವ 'ರಾಗ'ದಲ್ಲೇ ಕಳೆದುಕೊಳ್ಳುತ್ತೇನೆ. ನಡಿಗೆಯ ಲಯ ತಪ್ಪುತ್ತದೆ. ರಾಗದ ಲಯ ಹೊಂದಿಕೊಳ್ಳುತ್ತದೆ. ಬದುಕು ಒಮ್ಮೊಮ್ಮೆ ಏನೂ ಇಲ್ಲದ ಎಲ್ಲ ಇರುವ ಮಾಯಾ ಗೋಲ ಎಂದೆನಿಸುತ್ತದೆ. ನಾನು ಆ ಮಾಯಾ ಗೋಲದೆದುರು ನಿಂತು, ನಿಲ್ಲಲಾಗದೇ ತೇಲಿ ಹೋಗುವ 'ರಾಗ'ವಾಗುತ್ತೇನೆ. ಮಧ್ಯರಾತ್ರಿಯ ಕನಸಿನಲ್ಲಿ ನಾನು ಹಾಡುತ್ತೇನೆ. ಯಾರ ಎದುರೂ ಹಾಡದ ನಾನು ! ಯಾರ ಜೊತೆಗೆ ನಾನು ಲಯ ಹೊಂದಿಸಿ 'ಸಾಥ್' ನೀಡುತ್ತೇನೆ ? ನಿಧ ನಿಧಾನವಾಗಿ ಅಲ್ಲಿಂದ ಹೊರಬಂದು ಗಮನಿಸಿದರೆ ಲಯ ಜೊತೆಗಿರುತ್ತದೆ. ರಾತ್ರಿಯಿಡಿ ಗುನುಗಿಕೊಂಡ 'ರಾಗ' ಯಾವುದೋ ? ಬೆಳಿಗ್ಗೆ ಎದ್ದಾಗ ಆಗಷ್ಟೇ 'ರಾಗ'ವನ್ನು ಒಲಿಸಿಕೊಂಡ ಸಾಧಕನ ಕಳೆ 'ಮನಸ್ಸಿಗಿರುತ್ತದೆ !

Wednesday, October 22, 2008

ಹೇಗೆ ಪ್ರೀತಿಸಲಿ ಹೇಳು ?


ಹೇಗೆ ಪ್ರೀತಿಸಲಿ ಹೇಳು ?

ಇರು ಒಮ್ಮೆ ಲೆಕ್ಕ ಹಾಕಿಬಿಡುವೆ ದಾರಿಗಳನ್ನ

ನೀ ನನ್ನೆದುರು ಕಾಣದಂತೆನಿಸಿದಾಗ

ನನ್ನಾತ್ಮ ಮುಟ್ಟಬಲ್ಲ ಆಳ ಅಗಲ ಎತ್ತರಗಳಷ್ಟು ಪ್ರೀತಿಸುವೆ.

ದೇವರ ಚಿತ್ತ ಮುಟ್ಟುವವರೆಗೆ ಅವನೊಲಿದು ಕೃಪೆ ನೀಡುವವರೆಗೆ.

ದಿನ ಬೆಳಗಲು ಸೂರ್ಯ ಕತ್ತಲೆಗೆ ಹೊಗೆಯುಗುಳುವ ದೀಪ

ಅನಿವಾರ್ಯ ಅಗತ್ಯದಷ್ಟು ನಾ ನಿನ್ನ ಪ್ರೀತಿಸುವೆ.

ಮನುಷ್ಯ ಹಕ್ಕು ಸಾಧಿಸಲು ತುಡಿಯುತ್ತಾನೆ ಆದರೆ

ಮುಕ್ತವಾಗಿ ಶುದ್ಧೋ ಶುದ್ಧವಾಗಿ ದೇವರಿಂದ ಬಯಸಿದಂತೆ ನಾ ನಿನ್ನ ಪ್ರೀತಿಸುವೆ.

ಹಳೆ ನೋವುಗಳನ್ನು ನೆನಪಿಸಿಕೊಳ್ಳುವ ತೀವೃತೆ

ಮಕ್ಕಳಾಟಿಕೆಯ ಮುಗ್ಧ ನಂಬಿಕೆಯಲ್ಲಿರುವ ಆಶಯದಂತೆ ನಾ ನಿನ್ನ ಪ್ರೀತಿಸುವೆ.

ಪವಾಡ ಪುರುಷರ ಮೇಲೆ ಈ ಹಿಂದೆ ನನಗಿದ್ದ ತೀವೃ ನಂಬಿಕೆಯಷ್ಟು ನಾ ನಿನ್ನ ಪ್ರೀತಿಸುವೆ.

ನನ್ನುಸಿರು ನೋವು ನಲಿವುಗಳಲ್ಲೆಲ್ಲ ನಾ ನಿನ್ನ ಪ್ರೀತಿಸುವೆ

ದೇವರು ನನ್ನ ಮೇಲೆ ಕರೆದುಕೊಂಡರೂ ಸತ್ತಾಗ ನಾ ನಿನ್ನ ಇನ್ನೂ ಹೆಚ್ಚಾಗಿ ಪ್ರೀತಿಸುವೆ....

ನೋಟ್: ಸಾನೆಟ್ ನಲ್ಲಿಯ ರೈಮ್ ಪ್ಯಾಟರ್ನ್ ಪಾಲಿಸುವುದು ಕಷ್ಟ ಆಗಿದೆ. ಇನ್ನೊಮ್ಮೆ ಪ್ರಯತ್ನಿಸಿ ಪ್ರಕಟಿಸುತ್ತೇನೆ. ಓದುಗರ ಪ್ರಯತ್ನಕ್ಕೆ ಸದಾ ಸ್ವಾಗತ...

ಮೂಲ ಕವನ : ಎಲಿಜಬೆತ್ ಬ್ರೌನಿಂಗ್,

How do I love thee ?


How do I love thee? Let me count the ways.
I love thee to the depth and breadth and height
My soul can reach, when feeling out of sight
For the ends of Being and ideal Grace.
I love thee to the level of everyday's
Most quiet need, by sun and candle-light.
I love thee freely, as men strive for Right;
I love thee with the passion put to use
In my old griefs, and with my childhood's faith.
I love thee with a love I seemed to lose
With my lost saints,--I love thee with the breath,
Smiles, tears, of all my life!--and, if God choose,
I shall but love thee better after death.

Thursday, October 16, 2008

ರಾಗ


ಅಸದಳ ರಾಗದ ಗುಂಗೊಳಗೆ
ಕಂಡ ಬೆಳಕು ಮಸೆದಿದೆ ಮನಸ
ದೀಪಕ ಬೆಳಕ ರಂಜಿನಿ ಪ್ರೀತಿಯ
ಮನಸೊಳಗೆ ಮೂಡಿಸಿ ಮುಸಿ ಮುಸಿ ನಕ್ಕಿದೆ.
ಮೇಘ ಮೂಡಿದೆ ಮನಸು ಹಾಡಿದೆ
ಕನಸ ಕಡೆಗೆಲ್ಲ ಮಲ್ಹಾರ ಹಿಡಿದಿದೆ
ಮೂಡಿದ ಧ್ವನಿಗೆಲ್ಲ ತಿಳಿಯದ ತಿಲ್ಲಾನ
ಕಾಡಿದ ಸ್ವರಕೆಲ್ಲ ರಾಗದ ರಂಗು ತಂದು
ಅಸದಳ ರಾಗದ ಗುಂಗೊಳಗೆ ಮನಸು ತೇಲಿದೆ.

Sunday, September 21, 2008

ಥೂ !


ಥೂ !
ನಾನಷ್ಟು ಕಟುಕನಲ್ಲ...
ಕಣ್ಣಂಚಿನಲ್ಲೇ ಮೂಡಿ ಅಲ್ಲೇ ಕರಗಿ ಹೋದ
ಕನಸಿಗೆ ಹಳಹಳಿಸಿದ್ದಂತೂ ನಿಜ...
ಇನ್ನೊಬ್ಬರ ಬದುಕು ಬಸವಳಿಯುವುದ ಕಂಡು
ಖುಷಿ ಪಡುವ ಕಟುಕ ನಾನಂತೂ ಅಲ್ಲ...
ಅದ್ಯಾರೋ ಕಣ್ಣು ಕಾಣದವಗೆ ಕನಸ ತೋರಿಸಿ
ಖುಷಿ ಪಟ್ಟವ ನಾನು, ಮಲ್ಲಿಗೆ ಹೂವು ಕಂಡು
ಕಣ್ಣರಿಳಿಸಿದ ಕುಂಟು ಹುಡುಗಿಯ ಕೈ ಹಿಡಿದು ನಡೆಸಿದ್ದೆ.
ಬದುಕು ಎದುರಿಸುವ ಧೈರ್ಯವಿಲ್ಲದವನ ಹಿಂದೆ ಬದುಕ
ಹಿಡಿದು ಹೊರಟಾಗಲೇ ಭಯ ಪಟ್ಟಿದ್ದೆ.
ಮನಸೇ ನೋಡದವರೆದುರು ನನ್ನದು ಮೂಕ ವೇದನೆ
ಒಡೆದ ಬದುಕ ಚೂರು ಚೂರೇ ಕೂಡಿಸುತ್ತಿರುವ
ಥೂ !
ನಾನು ಕಟುಕನಲ್ಲ, ಮೇಲಿರುವ ಕಟುಕ ಬಳಸುವ ಕತ್ತಿ !

Wednesday, September 17, 2008

ಫಿನಿಕ್ಸ್ ...


ಉರಿದ ಹೆಣದ ಬೂದಿಯಿಂದ ಮತ್ತೆದ್ದು ಬರುತ್ತದೆ
ಸುಡುಗಾಡು ಬದುಕಿನ ಕನಸು ಫಿನಿಕ್ಸ್ ನಂತೆ.

ಹುಗಿದ ಗೋರಿಯ ಕಲ್ಲಂಚ ಸಂಧಿನಿಂದ
ಚಿಗುರೆದ್ದು ಬರುತ್ತದೆ ಹುಗಿದ ಕನಸು ಗಿಡದಂತೆ.

ಮುಗಿದ ಶಿಶಿರದ ಹಿಂದೆ ಓಡೋಡಿ ಹೂ
ಮುಡಿದು ಬರುತ್ತದೆ ಕನಸು ಆಸೆಯಂತೆ.

ಕಟ್ಟಿದ ಉಸಿರ ಕೊನೆ ಗುಕ್ಕನು ದಾಟಿ
ಎದೆಯಾಳದಿಂದ ಮೇಲೆದ್ದು ಬರುತ್ತದೆ ಬದುಕು.

Thursday, August 28, 2008

ಹೀಗೊಂದು ಧ್ಯಾನ ...


ದೊಂದು ಗದ್ದೆ ಬದಿಯ ಸ್ಥಳ. ದಟ್ಟ ಕಾಡ ನಡುವಿನ ಗುಡ್ಡ ಕಡಿದು ಗದ್ದೆ ಮಾಡಿರುವ ಜಾಗೆ ಅದು. ಏರು ತಗ್ಗುಗಳ ಗದ್ದೆ ಹಾಳೆಯನ್ನೆಲ್ಲ ಹಾರುತ್ತಾ ಹೋದರೆ ಗದ್ದೆಯ ಒಂದು ಬದಿ ಗೋಚರಿಸುತ್ತದೆ. ಈ ಗದ್ದೆಯ ಬದಿಯ ಗುಂಟ ನದಿಯೊಂದು ಹರಿಯುತ್ತದೆ. ನದಿಯ ಎರಡು ಬದಿಯಲ್ಲೂ ಕಾಡ ಮಾವಿನ ಮರಗಳು. ಉರಿ ಬಿಸಿಲಲ್ಲೂ ದಟ್ಟ ನೆರಳು. ಎತ್ತರದ ಒಂದು ಹಾಳೆಯಿಂದ ಜಿಗಿದು ಕೆಳಗಿಳಿದರೆ ತಟ್ಟನೆ ಗವ್ವೆನ್ನುವ ನಿರಾಳ ಮೌನದ ನೆರಳು ದೇಹವನ್ನು ತಾಕುತ್ತದೆ. ಹೊಳೆ ನೀರಿನ ತಂಪಿನೊಂದಿಗೆ ಮಾವಿನ ಮರದ ನೆರಳು ಮಿಳಿತಗೊಂಡು ತಂಪು ಗಾಳಿ ಮನಸ್ಸನ್ನು ತಾಕುತ್ತಲೇ ದೇಹ ಹತ್ತಿ ಹಗುರವಾಗುತ್ತದೆ.


ಲ್ಲೊಂದು ಸ್ಥಳ !

ಕಲ್ಪಿಸಿಕೊಳ್ಳಿ ...ನೆಲಕ್ಕೆ ಬಿದ್ದಂತಿರುವ ಕುನ್ನೆರಲ ಮರವೊಂದು ನೀರಡಿಕೆ ತೀರಿಸಿಕೊಳ್ಳಲೋ ಎಂಬಂತೆ ಹೊಳೆಯ ಮಧ್ಯಕ್ಕೆ ಚಾಚಿ, ಸಣ್ಣಕೆ ಹರಿಯುವ ಕಟ್ಟು ಹಾಕಿದ ಆ ನೀರ ನಿಶ್ಚಲತೆ (?) ಕದಡುವ ಮನಸಾಗದೆ ಅಲ್ಲೇ ನಿಂತಿದೆ. ಬಿಸಿಲ ಹೆಜ್ಜೆ ದಾಟಿ ಬಂದ ನಾನು ಪ್ರತಿ ಸಲ ನೀರ ಮಧ್ಯ ಬಾಗಿದ ಆ ಕುನ್ನೆರಲ ಮರದ ಕಾಂಡದ ಮೇಲೆ ಕುಳಿತುಕೊಳ್ಳುತ್ತೇನೆ. ಅಲ್ಲಿ ಆ ಕ್ಷಣ ನನ್ನ ಮನದ ಖುಷಿಯ ನಿನದ ಪ್ರಾಂರಭವಾಗುತ್ತದೆ. ಇನ್ನೇನು ನೀರಿಗೆ ತಾಕಿ ಬಿಡುತ್ತೇನೋ ಎಂಬಷ್ಟು ಹತ್ತಿರಕ್ಕೆ ಕಾಲು ಇಳಿಬಿಟ್ಟು ಕುಳಿತುಕೊಂಡರೆ ತಂತಾನೆ ಕಣ್ಣು ಮುಚ್ಚಿಕೊಳ್ಳುತ್ತದೆ. ಆ ಸ್ಥಳದಲ್ಲಿಯ ಮೌನವನ್ನು ಕಲುಕುವ ಇಷ್ಟವಿಲ್ಲದ ಪರಿಸರದ ಎಲ್ಲ ಜೀವ ಜಾಲಗಳು ನಿಶ್ಚಲವಾಗಿವೆ. ಈಗ ತಾನೆ ಸುಡುಸುಡು ಬಿಸಿಲ ದಾಟಿಬಂದ ಎಲ್ಲ ಜೀವಜಂತುಗಳಿಗೂ ಈ ಸ್ಥಳ ತಂಪುಮೌನ ತಂಗಾಳಿ ನೀಡುತ್ತದೆ. ಕಾಂಕ್ರಿಟ್ ಕಟ್ಟಡದ ಒಳಗೆ ಕೂತು ಕಣ್ಮುಚ್ಚಿ ತಾಸು ಕೂತರು ಪ್ರಾಪ್ತವಾಗದ 'ಧ್ಯಾನ' ಇಲ್ಲಿ ಕುಳಿತಾಕ್ಷಣ ಪ್ರಾಪ್ತವಾಗುತ್ತದೆ.


ಣ್ಬಿಟ್ಟು ನಾನು ಸುತ್ತೆಲ್ಲ ನೋಡುತ್ತೇನೆ. ಎಲ್ಲೆಡೆ ಹಸಿರು ತುಂಬಿದ ಭತ್ತದ ಬತ್ತದ ಗದ್ದೆ ಬೀಸುವ ಗಾಳಿಗೆ ಓಲಾಡುತ್ತ ಮೆಲ್ಲ ಮೆಲ್ಲನೆ ಈ ನಿರವ ಮೌನದ ತಪಸ್ಸ್ ಸ್ತಳಕ್ಕೆ ಹರಿದು ಬರುತ್ತಿದೆಯೇನೋ ಎಂಬಂತೆ ಭಾಸವಾಗುತ್ತಿದೆ. ಅದೆಲ್ಲಿಂದಲೋ, ಎಲೆ ಹೊಲೆದು ಗೂಡು ಕಟ್ಟುವ, ಯಾವತ್ತೂ ಕೂಗುತ್ತಿರುವ ಸಣ್ಣ ಸಿಂಪಿಗ ಹಕ್ಕಿ ಬಂದು ಕೂರುತ್ತದೆ. ಉಹುಂ ...ಗಲಾಟೆ ಮಾಡದೆ ಸುಮ್ಮನೆ ನನ್ನ ಕಣ್ಣಳತೆಯ ದೂರದಲ್ಲಿರುವ ಸಣ್ಣ ಕೊಂಬೆಯ ಮೇಲೆ ಕೂರುತ್ತದೆ. ಕೂಗುವುದಿಲ್ಲ ಅದು, ಕುಳಿತು ಕಣ್ಮುಚ್ಚುತ್ತದೆ. ಕೆಳಗೆ ಕಣ್ಣ್ ಹಾಯಿಸಿದರೆ ನೀರ ತುಂಬ ಮೀನುಗಳ ರಾಶಿ, ಉಹುಂ ಯಾವ ಮೀನು ಈಜುವುದಿಲ್ಲ ! ನೀರ ನಿಶ್ಚಲತೆಗೆ ಧಕ್ಕೆ ಬಾರದಂತೆ ನಿಂತಲ್ಲೇ ನಿಧಾನವಾಗಿ ರೆಕ್ಕೆಯನ್ನು ಬೀಸುತ್ತದೆ. ಇಡೀ ಪ್ರಕೃತಿ ಇಲ್ಲಿ ಅವರ್ಣನೀಯ ಮೌನದಲ್ಲಿದೆ.

ಕಾಲು ಇಳಿಬಿಟ್ಟು ಕುಳಿತ ನನ್ನ ಮನಸು ಎಲ್ಲ ಹರಿವು ಕಳೆದುಕೊಂಡು ನಿಶ್ಚಲವಾಗಿದೆ. ಹರಿಯಬಾರದು ಮನಸು. ಮೌನವಾಗಿ ಧ್ಯಾನಕ್ಕೆ ಕುಳಿತ ನಿಶ್ಚಲ ಕಲ್ಲಿನಂತಿರಬೇಕು. ಬೇರು ಇಳಿಬಿಟ್ಟು ದೃಢವಾಗಿ ನಿಂತ ಹೆಮ್ಮರದಂತಿರಬೇಕು.

Tuesday, August 26, 2008

ಅತ್ತು ಮಲಗಿದ ಮಗು...



ಒದ್ದೆಯಾದ ಮುದ್ದು ಜೇನು ಹೂವ ತುದಿಗೆ ಒಜ್ಜೆಯಾಗಿ

ಹಾರದೇನೆ ಮೌನವಾಗಿ ನೋವುತುಂಬಿ ಜೋಲುವಂತೆ

ಹೆಗಲ ಮೇಲೆ ಸುಸ್ತಿನಿಂದ ನನ್ನ ಮುದ್ದು ಮಗುವು ಮಲಗಿದೆ

ಕಂದು ಕೇಶ ಕಣ್ಣ ನೀರಿನಿಂದ ಕುಂಚವಾಗಿ ಕೆನ್ನೆಗಂಟಿದೆ.

ನನ್ನೆದೆಯ ಮೇಲೆ ಜೋತು ಬಿದ್ದ ಪುಟ್ಟ ಪುಟ್ಟ ಕಾಲುಗಳೆರಡು

ನಾ ನಡೆದಂತೆ ಹೆಜ್ಜೆಗೊಮ್ಮೆ ಹಿಂದೆ ಮುಂದೆ ಚಲಿಸಿವೆ.

ನಿದ್ದೆ ಬಂದ ಮುದ್ದು ಮಗುವು ಹೊರಲಾರದ

ಭಾರದಂತೆ ನನ್ನ ಬದುಕ ಜೊತೆಗೆ ಸಾಗಿದೆ.

ಮುದ್ದು ಆಟದಿಂದ ಹಗುರವೆನಿಸಿ ಈಗ ನೋವಿನಿಂದ ನಲುಗಿದೆ

ಕಣ್ಣ ನೀರಿನಿಂದ ನೆಂದು ದೊಡ್ಡ ಭಾರವೆನಿಸಿದೆ.

ಮೇಲೆ ಮೇಲೆ ತೇಲುತ್ತಿದ್ದ ಕೇಶವೆಲ್ಲ ಬಳಲಿ

ಒದ್ದೆಯಾದ ಜೇನ ರೆಕ್ಕೆ ಹಾರಲಾರದ ನೋವು ಹಾಗೂ ಭಾರದಿಂದ ಕೆಳಗಿಳಿದಂತೆ ಎನಿಸಿದೆ.


ಸೂಚನೆ: ಡಿ.ಎಚ್.ಲಾರೆನ್ಸ್ ಅವರ ಕವನದ ಭಾವಾನುವಾದ. ಮೂಲ ಕವನ ಕೆಳಗಿದೆ.


A Baby Asleep after Pain


As a drenched, drowned bee

Hangs numb and heavy from a bending flower,

So clings to me

My baby, her brown hair brushed with wet tears

And laid against her cheek;

Her soft white legs hanging heavily over my arm

Swinging heavily to my movements as I walk.

My sleeping baby hangs upon my life,

Like a burden she hangs on me.

She has always seemed so light,

But now she is wet with tears and numb with pain

Even her floating hair sinks heavily,

Reaching downwards;

As the wings of a drenched, drowned bee

Are a heaviness, and a weariness.

Tuesday, August 19, 2008

ನಮ್ಮಾಫಿಸಿನ ಕಿಡಕಿಯಲ್ಲೊಬ್ಬ ಸ್ಪೈಡರ್ ಮ್ಯಾನ್...





ಸೂಚನೆ: ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದದ್ದು...

ಹೀಗೊಂದು ಛಾಯಾಚಿತ್ರ.....


ಧಾರವಾಡದ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವಾಗ 'ಶಾಲ್ಮಲಾ' ವಸತಿ ನಿಲಯದಲ್ಲಿ ತೆಗೆದ ಛಾಯಾಚಿತ್ರ. ಮಾಮೂಲಿ ಕೊಡಾಕ್ ಕೆಮೆರಾದಲ್ಲಿ ತೆಗೆದ ಚಿತ್ರವಿದು. ನಾವು ಪ್ರತಿನಿತ್ಯ ಸ್ನಾನಮಾಡುವ ಮುಕ್ತ ಸ್ನಾನಗ್ರಹದ ಕಿಡಕಿಯೊಂದರಿಂದ ನೇರವಾಗಿ ನಳದ ಮೇಲೆ ಬೆಳಕು ಬೀಳುತ್ತಿತ್ತು. ನಾನು ಈ ಚಿತ್ರ ತೆಗೆವಾಗ ನನ್ನ ಸ್ನೇಹಿತರೆಲ್ಲ ನಗ್ತಾ ಇದ್ರು. ಎಲ್ಲಾ ಬಿಟ್ಟು ಬಕೆಟ್ ಹಿಂದ್ ಬಿದ್ದಿಯಲ್ಲಾ ಎಂದು ಹಾಸ್ಯ ಮಾಡಿದ್ದರು. ನನಗೂ ಕೂಡ ನನ್ನತ್ರ ಇದ್ದ 750 ರೂ ಕೆಮೆರಾ ಕಣ್ಣು ಚಿತ್ರವನ್ನು ಇಷ್ಟು ಅದ್ಬುತವಾಗಿ ಸೆರೆಹಿಡಿಯಬಹುದು ಎಂಬ ಕಲ್ಪನೆ ಇರಲಿಲ್ಲ. ಈ ಚಿತ್ರ ಹೇಗಿದೆ ? ನೀವೇ ಹೇಳಬೇಕು....




Monday, July 21, 2008

ಕಾಯ-ಬೇಕು




ಸುಡು ಸುಡುವ ಸಿಗರೇಟು ನೀರು ಬೆರೆಸದ ಕಟು ರಮ್ಮು
ಸುಡು ಸುಡುವ ನಿನ್ನ ಚಿತೆಯ ಇನ್ನೂ ಆರದ ನೆನಪು.

ನನ್ನ ದೇಹ ಮನಸು ಎಲ್ಲೆಡೆ ಭಗ್ನ ಬೆಂಕಿಯ ಜ್ವಾಲೆ
ಸುಟ್ಟು ಉರಿಯದೇ ನಾನು ಚೂರು ಚೂರೇ ಸುಟ್ಟು ನರಳಬೇಕು.

ಸತ್ತು ಸತ್ತು ಬದುಕಬೇಕು ನಾನು
ಮೇಲಿರುವ ನೀನು, ನಾನು ಆಗ ಬರುತ್ತೇನೆ ಈಗ ಬರುತ್ತೇನೆ ಎಂದು ಕಾಯಬೇಕು.

ಚೂರು ಚೂರೇ ಸುಡಲು ನನಗೀ ಕಾಯ ಬೇಕು
ನಾನು ಸಾಯಬಾರದು ಸತ್ತು ಸತ್ತು ಬದುಕಬೇಕು ಮೇಲಿರುವ ನೀನು ಕಾಯ-ಬೇಕು!

Tuesday, June 24, 2008

ಗಮ್ಯ


ಹನಿ ಕೂಡಿ ಹರಿವ ಜರಿ ಜಳಕ
ಕಲ್ಲು ಕಲ್ಲಿಗೂ ಶುಭ್ರ ನೀರ ಪುಳಕ
ಓಡೋಡಿ ಗಮ್ಯ ಸೇರುವ ತವಕ ..//ಹನಿ//

ಸಂಧಿ ಸಂಧಿಯ ಕಸವನೆಲ್ಲ ಸೆಳೆದು
ಹರಿವೆಡೆಯೆಲ್ಲ ಕೊಳೆಯ ತೊಳೆದು
ಜಲ ಜಲಧಿ ಭೋರೆಂದು ಮೊರೆದು //ಹನಿ//

ಲವಣ ಗಣ ಗುಣ ಗುಣಿಸಿ ಸೇರಿ
ಆಳದಾಳದಿ ಇಳಿದು ಕೋರಿ
ಮೇಲ್ಮೆಲೆ ಶರಧಿ ಒಳಗೊಳಗೆ ಶಾಂತದಾರಿ//ಹನಿ//

ಕನಸು ಮಾರುವವಳು


ದಿನಸಿ ಮಾರುವ ಅಂಗಡಿಯವನ ಮಗಳು
ಎದುರು ಗುಡಿಸಲ ಹುಡುಗನಿಗೆ ಕನಸು ಮಾರುತ್ತಾಳೆ.
ಮಾರುದ್ದ ಜಡೆಯ ಬಳುಕಿಸಿ ಕುತ್ತಿಗೆ ಕೊಂಚ ಹೊರಳಿಸಿ
ಹೊರ ಬಂದಾಗೆಲ್ಲಾ ಸುಲೋಚನದೊಳಗಿಂದ ನೋಟ ಬೀರಿ
ದಿನಸಿ ಮಾರುವವನ ಮಗಳು ಕನಸು ಮಾರುತ್ತಾಳೆ...
ತುಕ್ಕು ಹಿಡಿದ ಬೋಗುಣಿಯಲಿ ಅನ್ನ ಕಾಸುವ ಆತ
ಕಾಸು ಕಾಸನೆಲ್ಲ ಕೂಡಿಟ್ಟು ಕಾಯುತ್ತಾನೆ
ದಿನಸಿ ಅಂಗಡಿಯ ಎದುರು ನಿಂತು ಕನಸು ಕಾಣುತ್ತಾನೆ.
ಬೆಳ್ಳಿ ಬಟ್ಟಲ ಹಿಡಿದು ಆಕೆ ಬಂದಾಗೆಲ್ಲಾ
ತನ್ನ ತಟ್ಟೆಯ ಮುಚ್ಚಿ ನಗುತ್ತಾನೆ..
ಮುದ್ದು ನಾಯಿಗೆ ಮುದ್ದೆ ಇಡುವ ಆಕೆಯು
ಕಣ್ಣ ಕೊಂಕಿಸಿ ಈತನಿಗೆ ಕನಸು ಮಾರುತ್ತಾಳೆ
ಆತ ಹೊಟ್ಟೆ ತುಂಬುವಷ್ಟು ಮುದ್ದೆ ತಿಂದ ಕನಸು ಕಾಣುತ್ತಾನೆ.
ದಿನಸಿ ಮಾರುವವನ ಮಗಳು ಎದುರು ಗುಡಿಸಲ ಹುಡುಗನಿಗೆ ಕನಸು ಮಾರುತ್ತಾಳೆ...



Monday, June 23, 2008

ಕಣ್ಣ ಕೊನೆಯು ನೆನೆಯದಿರಲಿ ಕೆಳದಿ..

ಕಟ್ಟಿ ಕೆಡವಿ ಕಟ್ಟಿ ಕೆಡವಿ ಕಳೆದು ಹೋಗಿರುವೆ ನಾನು
ಬೇಡ ನಾನಿನ್ನು ಇಲ್ಲಿ ಇರಲಾಗುವುದಿಲ್ಲ ಕಳೆದು ಹೋಗುತ್ತೇನೆ
ಕಟ್ಟಿ ಕೆಡಹುವ ಕನಸೇ ಇಲ್ಲದ ಭವ್ಯ ಸುಂದರ ಕಾಡ ಕಡೆಗೆ
ತಾನು ತಾನೆ ಅರಳಿಕೊಳುವ ಹಸಿರಿನೆಡೆಗೆ...
ಸುಮ್ಮನರಳಿ ಸುಮ್ಮನುರುಳುವ ಸುಮದ ತೆರದಿ.
ಮಾತೂ ಸಾಕು ನೋಟವೂ ಸಾಕು ನೆನಪೂ ಬೇಡ ನನಗೆ
ನಿನ್ನ ಕಣ್ಣ ಕೊನೆಯೂ ಎಂದು ನೆನೆಯದಿರಲಿ ಕೆಳದಿ
ಜಗದ ಎಲ್ಲ ನಗೆಯು ಇರಲಿ ನಿನ್ನ ಜೊತೆಯಲಿ.

Tuesday, June 17, 2008

ಕಾವ್ಯಗಳೆಲ್ಲ...


ಕಾವ್ಯಗಳೆಲ್ಲ ಮುಗಿದ ಭಾವನೆಗಳ ಸರಕು
ಮುಗಿದ ಪ್ರೀತಿಯ ಹೊಳಹು...
ಮರೆತ ಮಾತಿನ ಮೆಲುಕು..
ಕಾವ್ಯವೆಲ್ಲ ಇರದ ಭಾವನೆಯ ಸರಕು...
ಭವಿಷ್ಯದ ಬಯಕೆ ಕನಸಿನ ಹಳಹಳಿ
ಸಿಗದ ಪ್ರೀತಿಯ ಸುತ್ತ ಸುತ್ತುವ ಭವಿಷ್ಯದ
ಭಾವನೆಗಳ ಗಿರಕಿ...
ಕಾವ್ಯಗಳೆಲ್ಲ ವಾಸ್ತವ ಒಪ್ಪದವನ
ಪಲಾಯನದ ಹಾದಿ...!

Monday, June 16, 2008

ಮೌನದಾಳಕ್ಕೆ ಇಳಿಯುತ್ತೇನೆ...


ಮೌನದಾಳಕ್ಕೆ ನಾನು ಇಳಿಯುತ್ತಿದ್ದೇನೆ
ಮಾತುಗಳಿಂದ ಬೇಸರಾಗಿದೆ ನನಗೆ...
ಬರೀ ಪೊಳ್ಳು ಮಾತುಗಳ ಬೆನ್ನು ಹತ್ತುವ ಬಾಳು ಸಾಕಾಗಿದೆ
ಗದ್ದಲದ ನಡುವಲ್ಲೂ ದಿವ್ಯ ಸಂತಸ ನೀಡುವ ಮೌನದಾಳಕ್ಕೆ ಇಳಿಯುತ್ತಿದ್ದೇನೆ...
ಮಾತು ಮನದೊಳಗಿಂದ ಹಾಗೆ ಹೊರಬರದೇ ನಾಲಿಗೆಯಲ್ಲಿ
ಬಣ್ಣ ಬಳಿದುಕೊಳ್ಳುತ್ತದೆ
ಮೌನ ಹಾಗಲ್ಲ ಬಣ್ಣ ಬಳಿಯಬೇಕಾಗಿಲ್ಲ ನಾನು
ಹೇಗಿದೆಯೋ ಹಾಗೆ ಮಾತನಾಡುವ ಮೌನ
ನಾ ಹೇಳಲಾರದ್ದನ್ನೆಲ್ಲ ಹಾಗೇ ಹೇಳಿ ಬಿಡುವ
ನಾನು ಮೌನಕ್ಕಿಳಿಯುತ್ತೇನೆ ನನ್ನ ಮೌನ
ಪಟಪಟನೆ ಮಾತನಾಡುವ ನಾಲಿಗೆಗೆ ಅರ್ಥವಾಗುತ್ತದೆ ಎಂಬ ಹುಂಬ ನಂಬಿಕೆಯಲ್ಲಿ ...
ಮಾತನಾಡುವ ನಾಲಿಗೆಯ ಹಂಬಲವೂ ಅದೇ ಎನ್ನುವ ಹುಚ್ಚು ಬರವಸೆಯಲ್ಲಿ
ನಾನು ಮೌನಕ್ಕೆ ಶರಣಾಗುತ್ತೇನೆ...
ಮಾತುಗಳಿಂದ ಬೇಸರಾಗಿದೆ ನನಗೆ 'ಮಾತು' ಪಡೆದುಕೊಳ್ಳುವ
ಬಣ್ಣ ಬೇಕಿಲ್ಲದ ಮೌನಕ್ಕೆ ಜಾರುತ್ತೇನೆ
ನನ್ನ ಮೌನ ಅರ್ಥವಾಗುತ್ತದೆ ಎಂಬ ಬರವಸೆಯಲ್ಲಿ...

Wednesday, June 11, 2008

ನೀನಾ ನಾಯಕ ...?


ಬೀಜ ಬಿತ್ತುವ ಕನಸ ಕಂಡವನೆದೆಗೆ ಗುಂಡು ಹಾರಿಸಿದೆಯಲ್ಲ
ಹೊಲ ಹಸನಿಗೆ ಬೆವರು ಸುರಿಸಿದವನ ನೆತ್ತರು ಹರಿಯಿತಲ್ಲ
ಮೊನ್ನೆಯಷ್ಟೇ ಮೊಹರು ಒತ್ತಿ ನಿನ್ನ ನಾಯಕನಾಗಿಸಿದ್ದೆನಲ್ಲೋ ...
ಒಡಲ ಸಿಳಿಬಿಟ್ಟೆಯಲ್ಲ ಕನಸ ಕಳೆದು ಬಿಟ್ಟೆಯಲ್ಲ !

ಬಿತ್ತು ಬೀಜ ಬಿಳಿಗೊಬ್ಬರ ಕರಿ ಮೋಡ ಕಂಡಾಗೆಲ್ಲಾ
ತಂದಿಟ್ಟುಕೊಳ್ಳದ ನೀನು ಕಂಡ ಕಂಡಲ್ಲೆಲ್ಲ ಗುಂಡು ಹಾರಿಸುವ
ಭಂಡತನವ ತೋರಿದ್ದೇಕೋ ?
ಮುಂಗಾರು ಮಳೆಯಲ್ಲಿ ಮೂಡಿದ ಕನಸಿಗೆ
ಹಸಿರ ತೊಡಿಸುವುದ ಬಿಟ್ಟು ನೆತ್ತರ ಹರಿಸಿ ಬಿಟ್ಟೆಯಲ್ಲ...
ರೈತ ರಕ್ತವ ಮಿಂದ ನೆಲದಲ್ಲಿ ಹಸಿವು ಕಳೆದು
ಹಸಿರು ಮೂಡುವುದೆಂತೋ ?
ಮೊನ್ನೆಯಷ್ಟೇ ಮೊಹರು ಒತ್ತಿ ನಾಯಕನಾಗಿಸಿದ್ದೆವಲ್ಲ ನಿನ್ನ
ಕನಸ ಕಳೆದು ಬಿಟ್ಟೆಯಲ್ಲ
ಬೀಜ ಬಿತ್ತಬೇಕಾದ ನೆಲದಲ್ಲಿ ನೆತ್ತರ ಹರಿಸಿಬಿಟ್ಟೆಯಲ್ಲ...!
ಸೂಚನೆ:ರಸಗೊಬ್ಬರ ಮತ್ತು ಬಿತ್ತನೆ ಬೀಜ ವಿತರಣೆಯಲ್ಲಿ ಆದ ವಿಳಂಬ ಪ್ರತಿಭಟಿಸಿದ ರೈತರ ವಿರುದ್ಧ ಹಾವೇರಿಯಲ್ಲಿ ಜೂನ್ 10ರಂದು ನಡೆದ ಗೋಲಿಬಾರ್ ಕುರಿತಾಗಿ ಬರೆದದ್ದು.

Tuesday, June 3, 2008

ಲಹರಿ


ಬಾಗಿಲ ಸಂಧಿಯಲ್ಲಿ ಇಣುಕಿ ನೋಡಿದ ನಿನ್ನ ಕಣ್ಣಲ್ಲಿ

ಕಂಡಿದ್ದು ನನ್ನ ಕುರಿತು ಜಿಗುಪ್ಸೆಯೋ, ತಿರಸ್ಕಾರವೋ ?

ಅದ್ಯಾವುದೋ ಒಂದು ಭಾವವಂತು ಕಂಡೆ ...

ಇರಲಿ ಬಿಡೆ ಹುಡುಗಿ ನಾ ಕಂಡಿದ್ದು ಪ್ರೀತಿ ಕನಸೇ ಹೊರತು ಧ್ವೇಷದ್ದಲ್ಲವಲ್ಲ...

ವೇಷ ಕಳಚಿದಂತೆ ಕಳಚಿ ಹೋಗುವ ಬಣ್ಣದ ಬಟ್ಟೆಯಂತೂ ಅಲ್ಲವೇ ಅಲ್ಲ...

ಪ್ರೀತಿ ಹೇಗೆ ಹುಟ್ಟುತ್ತೋ ತಿಳಿದರೇ ನಾನು ಹೀಗೆ ಇರುತ್ತಿರಲಿಲ್ಲ...

ನಿನ್ನ ಲ್ಲಿ ಹುಟ್ಟುತ್ತೋ ಇಲ್ಲವೋ ಸುಮ್ಮನೆ ಸುಮವೊಂದನ್ನು ಇಷ್ಟ ಪಟ್ಟಂತೆ ನಾ ಇಷ್ಟಪಟ್ಟರೆ

ತಪ್ಪೇನೂ ಇಲ್ಲವಲ್ಲ ಅಷ್ಟಕ್ಕೂ ಭಾವನೆಗಳಿಗೆ ಬರಬೇಡಿ ಎನ್ನುವ ಹಕ್ಕು ಯಾರಿಗಿದೆ ಹೇಳು ?

ನಿನ್ನಷ್ಟಕ್ಕೆ ನೀ ಇರು ನನ್ನಷ್ಟಕ್ಕೆ ನಾನಿರುತ್ತೇನೆ...

ಏಕತಾನತೆಯ ಬದುಕಿಗೊಂದು ಬರವಸೆ ಈ ಕನಸು ಅಷ್ಟೆ...


...................................................................
ಸುಮ್ಮಾನೆ ಅರಳುವ ಹೂವ ಕಂಡಾಗೆಲ್ಲಾ ನಿನ್ನ ನೆಪಪಾಗುವುದು ಕಲ್ಮಷವಿಲ್ಲದ ನಿರ್ಮಲ ನಿನ್ನ ನಗುವಂತೆ.
ವಸಂತಕ್ಕೆ ಚಿಗುರಿದ ಮರದ ಮರ್ಮರದಲ್ಲಿ ಹಸಿರ ಮರೆಯಲ್ಲಿ ಉಸಿರು ಕಟ್ಟಿ ಹಾಡುವ ಕೋಗಿಲೆ
ಬಿಳಿ ರೆಕ್ಕೆ ಬಿಚ್ಚಿ ಹಾರುವ ಹಕ್ಕಿ ಕಂಡಾಗ ನಿನ್ನ ನೆನಪಾಗುವುದು. ಆದರೆ ನೀ ಎದುರು ಬಂದಾಗ ಮಾತು ಒಳಗೊಳಗೆ ಉಡುಗುತ್ತೆ ಭಯ ಬೀಳುತ್ತೇನೆ ಬದುಕ ಆ ತುದಿಯಿಂದ ಈ ತುದಿಯವರೆಗೆ ಸತ್ತು ಹೋದ
ಭಾವನೆಗಳೆಲ್ಲಿ ಮತ್ತೇ ಉದಯಿಸಿಬಿಡುತ್ತವೋ ಎಂದು...
.......................................................................................................
ಸುಳ್ಳು ಭಾವನೆಗಳ ಬೆನ್ನು ಹತ್ತಿದ ಸುಳ್ಳು ಸತ್ಯ ಜೀವನ
ಮಳ್ಳು ಮನದ ಆಟಕೆಲ್ಲ ವೇದಿಕೆಯಿದು ಪ್ರತಿದಿನ
ಸಣ್ಣ ನಗು ಒಂದು ಮಾತು ಅಷ್ಟು ಸಾಕೆ ಭಾವಕೆ ?
ಒಂದೇ ಒಂದು ಕನಸು ಸಾಕೆ ಬಾಳ ನಾವು ಸವಿಯಲು.










Tuesday, April 29, 2008

ತಪ್ಪಿಯೂ .....


ತಪ್ಪಿಯೂ ನಾನೀಗ ಆಚೆ ಹೆಜ್ಜೆ ಇಡುವುದಿಲ್ಲ

ಅದೋ ನೀನಲ್ಲಿ ಅವಕಾಶ ದಿಟ್ಟಿಸುತ್ತ ಮುಗ್ದೆಯಂತೆಯಂತೆ

ಕುಳಿತಿರುತ್ತಿದ್ದ ಆ ಹೆಮ್ಮರದ ಅತ್ತಲೂ ಸುಳಿಯುವುದಿಲ್ಲ.

ನೀನಿಲ್ಲದ ಆ ಸ್ಥಳ ಈಗ ಬರೀ ನೆನಪ ಮರ್ಮರ...

ದಿನ ನಿನ್ನ ಪಾದದಡಿ ಬೀಳುತ್ತಿದ್ದ ಕುಸುಮಕ್ಕೆ ಈಗ ಖುಷಿಯಿಲ್ಲ

ಹೀಗೆ ಹೇಳದೆ ಕೇಳದೆ ನೀನು ಎದ್ದು ನಡೆದದ್ದು ಎಲ್ಲಿಗೋ ?

ಹೋಗುವಾಗೊಮ್ಮೆ ಹೇಳಿ ಹೋಗಬಾರದಿತ್ತೇ ?

ನೋಡು ಈ ಮರ ಈಗ ನೆರಳು ನೀಡಲೂ ಹಿಂಜರಿಯುತ್ತಿದೆ

ಬಿದ್ದ ನೆರಳಲ್ಲೂ ನಿನ್ನ ನೆನಪೇ ಬಿಸಿಲಾಗಿ ಉರಿಯುತ್ತಿದೆ ..!

Tuesday, April 22, 2008

ನೀ ಅರಳದ ದಿನ


ಏ ಸುಮವೇ ನೀ ಅರಳದ ದಿನ ನಗಲಾರನು ಸೂರ್ಯ !

ನೀ ಅರಳದ ದಿನ ಉಣಲಾರದು ದುಂಬಿ

ನೀ ಅರಳದ ದಿನ ದೇವರ ಪಾದಕ್ಕೇನೂ ?

ನೀ ಅರಳದ ದಿನ ಸುಗಂಧ ತರಲಾರದು ಗಾಳಿ

ನೀ ಅರಳದ ದಿನ ಧರೆಯ ಸೌಂಧರ್ಯ ಬರೀ ಸುಳ್ಳು

ನೀ ಅರಳಲಾರದ ದಿನ ಪ್ರಿಯತಮೆಯ ಪ್ರೀತಿಗೇನು ಕೊಡುಗೆ ?

ನೀ ಅರಳದ ದಿನ ಮನದ ಕನಸಿಗೂ, ಹೆಣದ ಹಾರಕ್ಕೂ ಕೊರತೆಯೆ.

Monday, April 21, 2008

ಮಗುವೊಂದರ ಸ್ವಗತ .....




ಏಷ್ಯಾದ ಅತಿದೊಡ್ಡ ಕೊಳಚೆಗೇರಿಯ ನೆತ್ತಿಯಲ್ಲಿ ವಿಮಾನವೊಂದು ಹಾದು ಹೋಗುತ್ತದೆ. ಅಲ್ಲೆಲ್ಲೋ ಮೂಲೆಯಲ್ಲಿ ಕುಳಿತಿದ್ದ ಅಸ್ಥಿಪಂಜರದಂತಿದ್ದ ಹಸಿದ ಹುಡುಗನೊಬ್ಬ ತನ್ನೊಳಗೆ ಹೇಳಿಕೊಳ್ಳುತ್ತಾನೆ. ನಾನು ಲೋಹದ ಹಕ್ಕಿಯನ್ನು ಹಾರಿಸುವ ಫೈಲಟ್ ಆಗಬೇಕು.... ಕೊಳಚೆಗೇರಿಯ ಕೊಳಕು ಸಂದಿಗಳಲ್ಲಿ ವಿಮಾನದ ಹೆಜ್ಜೆ (?) ಹುಡುಕುತ್ತಾ ಆತ ಅಲೆಯುತ್ತಾ ಹೇಳಿಕೊಳ್ಳುತ್ತಾನೆ. ನಾನು ಫೈಲಟ್ ಆಗಬಯಸುತ್ತೇನೆ...


ಸ್ವಗತದಲ್ಲಿ ಆತನ ಹಲುಬುವಿಕೆ ಮುಂದುವರೆಯುತ್ತದೆ. ಹೆಜ್ಜೆ ಹೆಜ್ಜೆಗೆ ಕೊಳಗೇರಿಯ ಕೊಳಕು ತೆರದುಕೊಳ್ಳುತ್ತದೆ.


ಆತ ಹೇಳುತ್ತಾನೆ ನಾನು ಫೈಲಟ್ ಆಗ ಬಯಸುತ್ತೇನೆ. ಯಾಕೆ ಗೊತ್ತಾ ? ನಾನು ಲೋಹದ ಹಕ್ಕಿಯಲ್ಲಿ ಕುಳಿತು ಈ ಕೊಳಗೇರಿಯನ್ನು ದಾಟಿ ಹೋಗ ಬಯಸುತ್ತೇನೆ... ಕೊಳಗೇರಿಯ ಹೊಲಸು ಕಳೆದು ದೂರದಲ್ಲಿರುವ ಹಸಿರ ಹರುಷ, ಹಕ್ಕಿಯ ಉಲಿ ತುಂಬಿರುವ ಕಾಡ ನಡುವಲ್ಲಿ ಬದುಕ ಬಯಸುತ್ತೇನೆ. ಅಲ್ಲಿಯ ಹಸಿರು ಮರಗಳಲ್ಲಿ ಹಕ್ಕಿ ಕೂಗುತ್ತಿರುತ್ತದೆ. ಮರಗಳ ಗೆಲ್ಲುಗಳೆಲ್ಲ ಹಣ್ಣು ಬಿಟ್ಟು ಗೆಲುವು ತುಂಬಿಕೊಂಡಿರುತ್ತವೆ. ನಾನು ಆ ಹಣ್ಣುಗಳನ್ನು ಖುಷಿಯಿಂದ ತಿನ್ನ ಬಯಸುತ್ತೇನೆ. ಹಕ್ಕಿಗಳ ಉಲಿಯನ್ನು ಕೇಳ ಬಯಸುತ್ತೇನೆ.


ನಾನು ಫೈಲಟ್ ಆಗ ಬಯಸುತ್ತೇನೆ. ಅಲ್ಲಿ ದೂರದಲ್ಲಿರುವ ಆ ಪ್ರಪಂಚದಲ್ಲಿ ಬದುಕ ಬಯಸುತ್ತೇನೆ. ಈ ಕೊಳಗೇರಿಯ ಗಲಾಟೆ ಕೊಳಚೆ ಸಾಕಾಗಿದೆ. ಉಸಿರಾಡಲು ನನಗೆ ಸ್ವಚ್ಛ ಗಾಳಿ ಬೇಕು. ಅಲ್ಲಿ ಹೋಗ ಬಯಸುತ್ತೇನೆ ಅದಕ್ಕಾಗಿಯೇ ನಾನು ಫೈಲಟ್ ಆಗ ಬಯಸುತ್ತೇನೆ. ಅಲ್ಲಿ ಅದೋ ದೂರಕ್ಕೆ ಅಲ್ಲೇಲ್ಲೋ ಇರುವ ನನ್ನ ತಂದೆ ತಾಯಿಗಳನ್ನು ನಾನು ಸೇರ ಬಯಸುತ್ತೇನೆ. ಇಲ್ಲಿಯ ಒಂಟಿ ಜೀವನ ನನಗೆ ಸಾಕಾಗಿದೆ.


ಕೊಳಚೆಗೇರಿಯ ಕಸದ ರಾಶಿಯಲ್ಲಿ ಲೋಹದ ತುಂಡೊಂದನ್ನು ಹುಡುಕಿಕೊಂಡ ಅವನು ಗುಜರಿ ಮಾರುವ ಅಂಗಡಿಗೆ ಹೋಗಿ ಹಣ ಪಡೆದುಕೊಂಡು ಒಣಗಿರುವ ಬ್ರೆಡ್ ಒಂದನ್ನು ಕರೀದಿಸುತ್ತಾನೆ. ಆತನ ಸ್ವಗತ ಮುಂದುವರೆಯುತ್ತದೆ. ನಾನು ಫೈಲಟ್ ಆಗ ಬಯಸುತ್ತೇನೆ . ನನಗೆ ಹೊಟ್ಟೆ ತುಂಬುವಷ್ಟು ಅನ್ನ ಸಿಗುವ ಅಲ್ಲಿರುವ ಜಾಗಕ್ಕೆ ಹೋಗ ಬಯಸುತ್ತೇನೆ. ಏಕೆ ಗೊತ್ತಾ ನಾನು ಸರಿಯಾಗಿ ಊಟ ಮಾಡಿ ಇವತ್ತಿಗೆ ನಾಲ್ಕು ದಿನವಾಯ್ತು . ದಿನ ಊಟ ಸಿಗುವ ಆ ಜಾಗಕ್ಕೆ ನಾನು ಹೋಗ ಬಯಸುತ್ತೇನೆ.




ನಾನು ಆ ದೂರ ಪ್ರಪಂಚಕ್ಕೆ ಹೋಗ ಬಯಸುತ್ತೇನೆ. ಅಲ್ಲಿ ಎಲ್ಲರೂ ನನ್ನ ಮುದ್ದಾಡುತ್ತಾರೆ. ಎಲ್ಲರೂ ನನ್ನ ಜೊತೆ ಆಟ ಆಡಲು ಬರುತ್ತಾರೆ. ಎಲ್ಲ ಮಕ್ಕಳನ್ನು ತಂದೆ ತಾಯಿ ಪ್ರೀತಿಸುವಂತೆ ನನ್ನನ್ನು ಎಲ್ಲರೂ ಪ್ರೀತಿಸುತ್ತಾರೆ. ಈ ಕೊಳಚೆಗೇರಿಯಲ್ಲಿ ಯಾರೂ ನನ್ನನ್ನು ಮಾತನಾಡಿಸುತ್ತಿಲ್ಲ, ಯಾರೂ ನನ್ನೊಂದಿಗೆ ಆಟಕ್ಕೆ ಬರುತ್ತಿಲ್ಲ, ಯಾರೂ ನನ್ನ ಮುದ್ದು ಮಾಡುವುದಿಲ್ಲ, ನನ್ನ ಪ್ರೀತಿಸುವವರು ಇಲ್ಲಿ ಯಾರೂ ಇಲ್ಲ. ಯಾಕೆ ಗೊತ್ತಾ ? ನನ್ನ ತಂದೆ ತಾಯಿಯಿಂದ ನಾನು ಏಡ್ಸ್ ರೋಗವನ್ನು ಬಳುವಳಿಯಾಗಿ ಪಡೆದಿದ್ದೇನೆ. ನಾನು ಫೈಲಟ್ ಆಗ ಬಯಸುತ್ತೇನೆ . ಈ ಪ್ರಪಂಚದಿಂದ ನಾನು ದೂರ ಹೋಗ ಬಯಸುತ್ತೇನೆ.


ನಾನು ಫೈಲಟ್ ಆಗ ಬಯಸುತ್ತೇನೆ....( ದಾರಿಯಲ್ಲಿ ಹೋಗುವ ಮಗುವನ್ನೆತ್ತಿಕೊಂಡ ತಾಯಿಯೊಬ್ಬಳು ಇವನನ್ನು ಒದ್ದು ಮುನ್ನಡೆಯುತ್ತಾಳೆ) ಆತ ಗೊಣಗಿಕೊಳ್ಳುತ್ತಾನೆ ನಾನು ಫೈಲಟ್ ಆಗ ಬಯಸುತ್ತೇನೆ....




ಸೂಚನೆ : ಇತ್ತೀಚೆಗೆ ಅಂತರಾಷ್ಟ್ರೀಯ ಡಾಕ್ಯಮೆಂಟರಿ ಫೆಸ್ಟಿವಲ್ ನಲ್ಲಿ ನೋಡಿದ ಡಾಕ್ಯುಮೆಂಟರಿಯ ಕುರಿತಾದದ್ದು.

Wednesday, April 16, 2008

ತಪ್ಪಿಸುತ್ತೇನೆ

ಕಣ್ತಪ್ಪಿಸುತ್ತೇನೆ ನಾನು ನಿನ್ನೊಡನೆ ಮಾತನಾಡುವಾಗೆಲ್ಲಾ
ಮೌನದಲ್ಲಿ ಸತ್ಯವನ್ನು ಕಣ್ಣೆಲ್ಲಿ ಹೇಳಿ ಬಿಡುವುದೋ...
ನೀ ಆಚೆ ನಡೆದರೆ ನಾ ಈಚೆ ನಡೆಯುವೆ
ನನ್ನ ದಿಕ್ಕು ಬೇರೆ ನೀ ನಡೆವ ದಾರಿಯೇ ಬೇರೆ
ದಿಕ್ಕು ತಪ್ಪಿಸುತ್ತೇನೆ ನಾನು ಒಂದೇ ದಾರಿಯಲ್ಲಿ ನಡೆದರೇ ನೀ ಸಿಗಬಹುದು...
ಕಣ್ನುಚ್ಚುವುದಿಲ್ಲ ನಾನು ರಾತ್ರಿಯಿಡೀ ಕಣ್ತೆರೆದಿರುತ್ತೇನೆ
ಕನಸೊಳಗೆ ನೀ ಬಂದರೆ , ನಿದ್ದೇ ತಪ್ಪಿಸುತ್ತೇನೆ...
ಎಲ್ಲ ಕ್ಷಣಗಳಲ್ಲೂ ನಿನ್ನ ನೆನಪ ತಪ್ಪಿಸುತ್ತೇನೆ ನಾನು
ನಿನ್ನ ನೆನೆಪಿಸಿಕೊಳ್ಳುತ್ತಲೇ ಕಣ್ತಪ್ಪಿಸಿ, ಕನಸ ತಪ್ಪಿಸಿ, ದಿಕ್ಕು ತಪ್ಪುತ್ತೇನೆ ನಾನು...

Monday, April 14, 2008

ನೆಲ ಕಾಣುವುದಿಲ್ಲ ..


ಯುದ್ಧ ಗೆದ್ದವರು ನಾವು ನೆಲಕಾಣುವುದಿಲ್ಲ !

ಡಿಸ್ಕೊಥೆಕ್ ನ ಒಳಗೆಲ್ಲೂ ಕತ್ತಲಲ್ಲಿ

ಅಲ್ಲಲ್ಲಿ ಮಿನುಗುವ ಬೆಳಕಲ್ಲಿ ನೆಲಕಾಣುವುದಿಲ್ಲ !



ಆಸ್ಥಾನ ರಾಜನಿಗೆಕೋ ಒಳಗೊಳಗೆ ಅಳುಕು

ಏರಿ ಇಳಿಯುವ ಬೇಡಿಕೆಯ ಗ್ರಾಪು ನೆಲಕಾಣುವುದಿಲ್ಲ (?)

ಇರಲಿ ಬಿಡು ಎಲ್ಲ ಮರೆತು ಒಮ್ಮೆ ಕುಣಿ(ಡಿ)ದು ಬಿಡೋಣ

ಯೋಚಿಸಿ ಹೆಜ್ಜೆ ಇಟ್ಟರಾಯ್ತು ಡಿಸ್ಕೊಥೆಕ್್ನ ಒಳಗೆಲ್ಲೂ ನೆಲ ಕಾಣುವುದಿಲ್ಲ.



ಬುರುಗು ಬಿಯರು ವಾಸನೆಯೇ ಇಲ್ಲದ ವೊಡ್ಕಾ

ನಶೆ ಏರಿದ ನರ್ತನ ಸಂತಸದ ಅಮಲು

ತರಾವರಿ ಹೆಚ್ಚೆಗೆ ನೆಲ ಕಾಣುವುದಿಲ್ಲ.



ಆಸ್ಥಾನ ರಾಜನಿಗೇಕೋ ಒಳಗೊಳಗೆ ಅಳುಕು

ಗಟ್ಟಿ ಕೂಗುತ್ತಾನೆ ನೆಲ ಕಾಣುವುದಿಲ್ಲ !

ಏರಿದ ಗೆಲುವಿನ ನಶೆ ಇಳಿಯುವವರೆಗೆ ನೆಲ ಕಾಣುವುದಿಲ್ಲ.

Wednesday, March 26, 2008

ಹೇಗೆ ಬಿಡಿಸಲಿ ಹೇಳೆ ?


ಹೇಗೆ ಬಿಡಿಸಲಿ ಹೇಳೆ ಚಿತ್ರವ ಚಿತ್ತ ನಿನ್ನೊಳಿರಲು ?

ಎಳೆದ ಗೆರೆಯಲೆಲ್ಲ ನಿನ್ನ ಮುಖ

ಬಳಿವ ಬಣ್ಣದಲೆಲ್ಲ ಕಣ್ಣು, ಕುಂಚದಂಚಲಿ ಬಂದು

ನಗುವ ನಿನ್ನ ನಾ ಕಡೆಗಣಿಸಿ

ಹೇಗೆ ಬಿಡಿಸಲಿ ಹೇಳೆ ಚಿತ್ರವ ?



ಕಲೆತ ಬಣ್ಣದಲೆಲ್ಲ ಕುಳಿತು ನೀ ಕಾಡಲು

ಶುಭ್ರ ಸೊಬಗಲೆಲ್ಲ ನೀ ಮೂಡಲು

ಪಕ್ಕ ನೀ ಕುಳಿತು ಪಕ್ಕೆ ತಿವಿದರೂ ಸರಿಯೆ

ಚುಕ್ಕೆ ಚಿತ್ರವ ಕೂಡ ಬರೆಯಲಾರೆ...

ಪ್ರೀತಿ ಬಣ್ಣದಲದ್ದಿ ಕನಸ ನಾ ಬಿಡಿಸಿರಲು

ಬಣ್ಣ ಕುಂಚವ ಮರೆತೆ ನಿನ್ನ ನೆನಪಲೆ ಕುಳಿತೆ

ಮನಸ ಬಿಳಿಹಾಳೆಯಲಿ ಮೂಡೋ ಚಿತ್ರವ ಮರೆತು

ಹೇಗೆ ಬಿಡಿಸಲಿ ಹೇಳೆ ಚಿತ್ರವ ?

Tuesday, March 18, 2008

ಅವಳು


ಶುಭ್ರ ಕಪ್ಪು ಕಂಗಳೆರಡು ನನ್ನ ಹೃದಯವ ಬೆಳಗಿವೆ

ಕಣ್ಣ ಮೇಲ್ಗಡೆ ಹೆರಳು ಸುಳಿಯಲು ಹೃದಯ ಬಡಿತವ ಮರೆತಿದೆ.

ಇಡುವ ಪುಟ್ಟ ಹೆಜ್ಜೆಯಲ್ಲಿ ಹೂವದೆಕೋ ಅರಳಿದೆ

ಹೂವೊಳಗಿನ ಗಂಧವದೋ ದುಂಭಿ ಹುಡುಕಿ ಹೊರಟಿದೆ.

ಇವಳ ನಗುವ ಮಧು ಮತ್ತಿಗೆ ಮನಸು ಹಾತೊರೆದಿದೆ

ಮಧು ತುಂಬಿ ತುಳುಕೊ ಇವಳು ಮಧು ಬಟ್ಟಲು ಎನಿಸಿದೆ.

ಮಾತ ವೀಣೆ ಮಿಡಿಯುತಿರಲು ಪ್ರೀತಿ ಹಾಡ ಹಾಡಿದೆ

ರಾಗದಲ್ಲಿ ಬೆರೆತ ನನ್ನ ಬಾಳು ಧನ್ಯ ಎನಿಸಿದೆ.

ಜ್ಞಾನೋಧಯ

ಸಂಧಿ ತಿರುವುಗಳಲ್ಲಿ ಮೆತ್ತನೆದೆ ಮಡಿಲಲ್ಲಿ
ದುತ್ತನೆದುರಾಯಿತು ಶಾಂತಿ
ಧ್ಯಾನ, ಗೀತೆ,ಯೋಗ ತಂತ್ರವು
ಅನಿಸಿ ಬಿಟ್ಟಿತು ಭ್ರಾಂತಿ...!
ಒಂಟಿ ಕಾಲಿನ ಗಂಟೆ ಮೌನವು
ತಾಕಲಾಟಕೆ ನಾಂಧಿ
ಮೆಚ್ಚು ಮಡದಿಯ ಸ್ವಚ್ಛ
ಪ್ರೀತಿಗೆ ಬ್ರಹ್ಮ ಜ್ಞಾನವು ಬಂಧಿ..!
ಸುರತ ಸುಕೃತ ಸುಳ್ಳದಲ್ಲವೋ
ಬ್ರಹ್ಮಚರ್ಯವು ಕಾಣೊ
ಹೆಣ್ಣ ಪ್ರೀತಿಯ ನೀನು ಅರಿತರೆ
ಜ್ಞಾನವಲ್ಲದೆ ಏನು ?

Tuesday, March 11, 2008

ಮತ್ತೆ ಹುಟ್ಟಿದೆ ಸತ್ತ ಪ್ರೀತಿ


ಮತ್ತೆ ಹುಟ್ಟಿದೆ ನೋಡು ಸತ್ತ ಪ್ರೀತಿ ನೆನಪ ನೆಪದಲ್ಲಿ

ಆ ದಾರಿಯತ್ತ ನಡೆದಾಗೆಲ್ಲಾ ಒಣಕೆರೆಯ ಸುತ್ತ

ಹುತ್ತ ಗಟ್ಟಿದ ನೆನಪ ನೆಪದಲ್ಲಿ ಹುಟ್ಟಿಕೊಳ್ಳುತ್ತದೆ ಸತ್ತ ಪ್ರೀತಿ

ಬುಡ ಎದ್ದು ಬಿದ್ದ ಕಮಲದ ಬಳ್ಳಿ

ಇದೇ ಬಳ್ಳಿಯ ಹೂವಿರಬೇಕು ನಾ ನಿನ್ನ ಮುಡಿಗೆ ಮುಡಿಸಿದ್ದು

ಬಿರುಕು ಬಿಟ್ಟಿದೆ ನೆಲ

ಇಲ್ಲೇ ಇರಬೇಕು ನಿನ್ನ ಬಿಂಬ ಮೂಡಿದ ನೀರ ಬೊಗಸೆಯಲ್ಲೆತ್ತಿ ಗಟಗಟನೆ ಕುಡಿದದ್ದು

ಒಣಗಿ ನಿಂತ ಬೋಳುಮರ

ಇಲ್ಲೇ ಹಸಿರ ಹರುಷವ ನಿನ್ನ ಕಣ್ಣಲಿ ಕಂಡು ಕುಣಿದಾಡಿದ್ದು

ಥೂ... ಮರೆತು ಬಿಡಬೇಕು ಎಂದುಕೊಂಡಾಗೆಲ್ಲಾ

ಮತ್ತೆ ಹುಟ್ಟಿಕೊಳ್ಳುತ್ತದೆ ಸತ್ತ ಪ್ರೀತಿ ನೆನಪ ನೆಪದಲ್ಲಿ

ಅರಳಿಕೊಳ್ಳಲಿ ಕಮಲ ತುಂಬಿಕೊಳ್ಳಲಿ ಬೊಗಸೆ ಹಸಿರು ತುಂಬಲಿ ಉಸಿರ

ಎಂಬ ಕನಸ ಕನವರಿಕೆಯಲ್ಲಿ ಮತ್ತೆ ಹುಟ್ಟಿಕೊಳ್ಳುತ್ತದೆ ಸತ್ತ ಪ್ರೀತಿ...

ಲಹರಿ

ದಟ್ಟ ಕತ್ತಲು ಧರೆಗಿಳಿದಂತೆ ನಿನ್ನ ಕೇಶ
ಅದರ ಸುತ್ತಲೇ ಸುತ್ತುವ ನೆನಪೇ ನನಗೆ ಪಾಶ
*****
ಯಾವಾಗಲು ನಗುವ ನಿನ್ನ ನಗೆಯ ಹಿಂದೇನೋ ವಿಷಾಧವಿದೆ
ಕಣ್ಣ ಸುತ್ತಲಿನ ಕಪ್ಪು ಹಿಡಿದಿಟ್ಟ ಕಣ್ಣೀರಿಗೆ ಸಾಕ್ಷಿಯಂತಿದೆ
****
ಮಾತನಾಡುವುದು ಆಗದಾಗ ಮೌನ ಮಾತ ಕಲಿಯಿತು
ಹೃದಯದೊಳಗೆ ಪ್ರೀತಿ ಮುರುಟಲು ಕಣ್ಣು ಹನಿಯನು ಕಂಡಿತು

Tuesday, February 26, 2008

ಕನಸ ಚಿವುಟುವ ಖುಷಿ


ಕನಸುಗಳನ್ನು ಮೂಲದಲ್ಲೇ ಚಿವುಟಬೇಕು !
ನಾ ಅನುಭವಿಸಿದ್ದೇನೆ ಕಟ್ಟಿದ್ದ ಕನಸು ಕನಸಾದರೆ ಆಗುವ ನೋವು
ಅದಕ್ಕೆ ಕಣೆ ಹುಡುಗಿ ಕನಸ ಮೂಲದಲ್ಲೇ ನಾ ಚಿವುಟಿದ್ದು
ಮಾತೇ ಆಡದ ನಾನು ಮನಸೊಳಗಿನ ಮಾತ ತೆರೆದಿಟ್ಟದ್ದು.
ಕನಸ ಭ್ರೂಣವ ಕುಡಿಯಲ್ಲೇ ಚಿವುಟಿದ್ದಕ್ಕೆ ನನಗೆ ಅಷ್ಟೇನು ನೋವಿಲ್ಲ
ಕನಸು ಕಣ್ತುಂಬಿ ಹೃದಯಕ್ಕಿಳಿದಾಗ ನಾ ಚಿವುಟುವುದು ಹೇಗಾಗಿತ್ತು ಹೇಳು ?
ಮೂಲದಲ್ಲೇ ಕನಸ ಮೂಲೆಗೆಸೆದಿದ್ದಕ್ಕೆ ನನಗೆ ಖುಷಿಯಿದೆ .....


ಕಿತ್ತೆಸೆದದ್ದು ಏಕೋ ?

ಮನಸೊಳಗೆ ಮುಡಿದಿದ್ದೆ ಕನಸ

ಹುಡುಗಿ ಹೆರಳಿಗೆ ಮುಡಿದಂತೆ ಕುಸುಮ

ಗಂಧದಲ್ಲಿತ್ತು ಮನಸು ಮಾತೆಲ್ಲ

ಜೀವನ ಅದೊಂದಿಷ್ಟು ದಿನ ಖುಷಿಯಿತ್ತು

ಅವಳ್ಯಾಕೆ ಕಿತ್ತೆಸೆದಳೋ ಹೆರಳ ಹೂವ ಬೇರೆಯದ ಮುಡಿಯಲು

ಮನಸ ತುಂಬೆಲ್ಲ ಬರೀ ಕಿತ್ತೆಸೆದ ಹೂವ ನರಳಿಕೆ....

ನೋಟ-ನೋಟು

ಬರೀ ನೋಟದಲ್ಲೇ ಪ್ರೀತಿ ಹುಟ್ಟುತ್ತೋ ?

ನಿನಗೆಲ್ಲೋ ಹುಚ್ಚು

ನೋಟಿಗಂಟಿಕೊಂಡ ಪ್ರೀತಿಯ ನೋಟದಲ್ಲಿ ಹುಡುಕುತ್ತಿರುವೆಯಲ್ಲ...!

ಅರೇ ನೀನ್ಯಾಕೆ ...?

ಆಗೆಲ್ಲಾ ಅವಳ ಕಣ್ಣ ನೋಟದ ಒಂದು ಝಲಕ್ ಆದರೂ ಸಿಗುತ್ತಿತ್ತು
ನನ್ನ ನಗುವಿಗೆ ಅಷ್ಟು ಸಾಕಿತ್ತು ದಿನವಿಡೀ ಖುಷಿಯ ಅಲೆಯಲಿ ಮನಸು ತೇಲುತಿತ್ತು
ಅರೇ ನಿನ್ಯಾಕೆ ಮನಸ ಪ್ರೀತಿಯ ಬಿಚ್ಚಿಟ್ಟೆ ಅವಳೆದುರಿಗೆ ?
ನಗುವ ನಷೆಯಲ್ಲೇ ಕಳೆದು ಹೋಗಿದ್ದೆಯಲ್ಲ ಕುಡಿತ ಬೇಡವಿತ್ತು ನಿನಗೆ
ಮದಿರೆ ಮಾತೇ ಬೇಡ ನಿನ್ನ ಮಧು-ರ ನಗುವಿದೆಯಲ್ಲ ಎನುತ್ತಿದ್ದೆ
ಅರೇ ನೀನ್ಯಾಕೆ ಮನಸ ಪ್ರೀತಿಯ ಬಿಚ್ಚಿಟ್ಟೆ ಅವಳೆದುರಿಗೆ ?
ಈಗ ಮಚ್ಚೆ ಕನಸೂ ಇಲ್ಲ ಮೆಚ್ಚಿನ ನಗುವೂ ಇಲ್ಲ ಮದಿರೆಯೊಡಲಿಗೆ ನೀನು ಶರಣು ...

Wednesday, February 20, 2008

ನಾನೊಂದ ಕನಸ ಕಂಡೆ




ಅದೆಷ್ಟು ದಿನವಾಗಿತ್ತೋ ಕನಸ ಕಂಡು !
ನಿದ್ದೆಯೊಳಗೆಲ್ಲ ಬರೀ ಬೆಂದ ಬದುಕಿನ ಚಿತ್ರಗಳೇ
ಬರೀ ಸುಡುಗಾಡು ಸನ್ಯಾಸಿ ಕಾವಿ ಕಂಡಿದ್ದೆ
ಇನ್ನೇನು ಹಿಮಾಲಯ ಹತ್ತಿ ಹೋಗಿ ಬಿಡಲೇ ಎಂಬಂತಹ ಸಮಯದಲ್ಲಿ
ಕಂಡೆ ನಾ ಕನಸೊಂದನ...
ಅದ್ಯಾರೋ ಚುಕ್ಕಿ ಹುಡುಗಿ ನಗುತ್ತಿದ್ದಳು
ಎಷ್ಷು ದಿನವಾಗಿತ್ತೋ ನಿದ್ದೆಗೆಟ್ಟು
ಕಣ್ಮುಚ್ಚಿದಾಗೆಲ್ಲಾ ತಕ್ಷಣ ಎಳೆದುಕೊಳ್ಳುತ್ತಿತ್ತು ನಿದ್ದೆ ತೆಕ್ಕೆಗೆ
ತೆಕ್ಕೆ ಸಡಿಲಿಸಿದೆ ನಿದ್ದೆ ಕಣ್ಣ ತುಂಬೆಲ್ಲ ಅದೇ ನಗು
ಬಹಳ ವರ್ಷಗಳ ನಂತರ ನಾನೊಂದು ಕನಸ ಕಂಡೆ
ಚುಕ್ಕಿ ಹುಡುಗಿ ನಗುತ್ತಿದ್ದಳು...

Friday, February 8, 2008

ಲಹರಿ


ಗೋಲಿ ಕಣ್ಣುಗಳ ಮರೆಸಿ ಮೂಗೇರಿ ಕುಳಿತ ಚಾಳೀಸ

ಭಾವನೆಯ ಮರೆಸಿ ಮಳ್ಳಾಟವಾಡಿದೆ.



*********



ಹಾಗೇ ಸುಖಾಸುಮ್ಮನೆ ಬರೆದ ಸಾಲುಗಳಲ್ಲೆಲ್ಲ

ಕುಳಿತು ನಗುತ್ತಾಳೆ ಅವಳು

ಇಳಿದ ಅಕ್ಷರಗಳ ಗೆರೆಯೊಳಗೆಲ್ಲ ನರ್ತಿಸುತ್ತಾಳೆ

ನಿರ್ಜೀವ ಅಕ್ಷರಗಳಿಗೆಲ್ಲ ಜೀವದ ಗೆಳತಿ.



********


ನನ್ನ ಪ್ರಾಣಕ್ಕೆ ಬೇಡಿಕೆ ಇಟ್ಟಿದ್ದರೆ ಕೊಟ್ಟು ಬಿಡುತ್ತಿದ್ದೆ

ಕಟ್ಟಿದ್ದ ಕನಸನ್ನಲ್ಲವೇ ಅವಳು ಕೇಳಿದ್ದು..

ಅದ್ಯಾರೋ ಹಣವಿದ್ದವನಂತೆ

ಅವನಿಗೆ ನನ್ನ ಕನಸುಗಳನ್ನು ಅವಳು ಉಣ ಬಡಿಸಬೇಕಂತೆ

ಹೇಗೆ ಕೊಡಲಿ ನೀವೇ ಹೇಳಿ
ಮುನಿದು ಮಾತು ಮರೆತಿದ್ದಾಳೆ

ದಯವಿಟ್ಟು ಅವಳಿಗೆ ತಿಳಿಹೇಳಿ ಹಣದ ಹಿಂದೆ

ನಾನು ಹೊರಟರೆ ಕನಸ ಹೆಣದ ಮೆರವಣಿಗೆ ಹೊರಡುತ್ತದೆಂದು...


*****

ಅದ್ಯಾಕೆ ಆಗಾಗ್ಗೆ ಕಳೆದು ಹೋಗುತ್ತೇನೆ ?

ಕನಸೊ ನನಸೊ ಎಂಬೋ ಕನ್ಫ್ಯೂಷನ್ನಲ್ಲಿ

ಆಕೆ ಆಗೋಮ್ಮೆ ಹೇಳಿದ್ದಳು ನಾನು ನಿನ್ನ ಪ್ರೀತಿಸುತ್ತೇನೆ

ಕನಸೆಂದುಕೊಂಡು ಸುಮ್ಮನಿದ್ದೆ...

ಈಗ ಹೇಳುತ್ತಾಳೆ ಮರೆತುಬಿಡು

ನನಸೆಂದುಕೊಂಡು ನರಳುತ್ತಿದ್ದೇನೆ...



********










Tuesday, February 5, 2008

ವ್ಯಕ್ತವಾಗದ ಭಾವನೆಗಳು


ವ್ಯಕ್ತವಾಗದ ಭಾವನೆಗಳು ಅವ್ಯಕ್ತತೆಯ
ಗೂಡಿನೊಳಗೊಂದು ನಾರು ಹುಳದ ಹಾಗೆ
ಕೊರಗಿ ಕರಗಿ ಚಿಟ್ಟೆಯಾಗುವ ಕನಸ ಹೊತ್ತು ನಿಟ್ಟುಸಿರು ಬಿಡುತ್ತಿವೆ.

ಬಯಕೆಗಳ ಸುಳಿಯಲ್ಲಿ ಸುಳಿದಾಡಿ
ಮನ ನರಳುವಿಕೆಯ ಕಂಡು ನಿಡುಸುಯ್ದು
ನಡು ಹಗಲು ಇದ್ದಾಗ್ಯೂ ಕತ್ತಲೆನ್ನುತ
ತಾ ಕಟ್ಟಿಕೊಂಡ ಗೂಡೊಳಗೇ ಕನಸ ಮೆಲ್ಲುತ್ತ.
ಮರದೊಳಗೆ ಕುಳಿತಿಹುದು ಕಾಗೆಯೋ ಕೋಗಿಲೆಯೋ
ಬಾಯ್ದೆರೆದು ಒಮ್ಮೆ ಹಾಡಿದರೆ ತಿಳಿಯುತ್ತಿತ್ತು
ವ್ಯಕ್ತಗೊಳ್ಳದ ಬಯಕೆಗಳು.

ಮನದ ಒಳಗೋಡಾಡಿ ಹೊರಗೆಡಹಿ
ಎಲ್ಲವನೂ ನಗಬೇಕಿದೆ ಒಮ್ಮೆ
ಆದರೂ ವ್ಯಕ್ತವಾಗಲೊಲ್ಲವು .


ಭೂಮಿ ನಡಗಿಸಿ ಸುಮ್ಮನಾಗುವ ಲಾವಾದಂತೆ
ವ್ಯಕ್ತವಾಗದ ಭಾವನೆಗಳು ಅಡಗಿ ಕುಳಿತಿಹ
ಕೊಪ್ಪರಿಗೆ ನಿಧಿಯಂತೆ
ಇರುವ ಜಾಗವ ಬಿಟ್ಟು ಬೆರೆಲ್ಲ ಅಗೆವಂತೆ
ಹೊರ ಬರುವ ಮಾತು ವ್ಯಕ್ತವಾಗದ ಭಾವನೆಗಳು !

Tuesday, January 29, 2008

Blog Adda

Visit blogadda.com to discover Indian blogs

Monday, January 21, 2008

ಆಕಾರವಿಲ್ಲದ್ದು


ನೆನಪಿಸಿಕೊಳ್ಳಬೇಕೆಂದುಕೊಳ್ಳುತ್ತೇನೆ
ಮರೆತಿದ್ದೇನೆ ಎಲ್ಲ ಚಿತ್ರಗಳನ್ನು
ಆದರೆ ನೆನಪಿದೆ ನಿನ್ನ ಹೆರಳ ಸುವಾಸನೆ
ನಿನ್ನ ನಗೆಯ ಮಿಂಚು, ಸೆರಗ ತಿರುಗಿಸುತ್ತಿದ್ದ ನಿನ್ನ ಕೈ ಬೆರಳ ಮೊನಚು
ಒಟ್ಟಾರೆ ನೀನು ಹೇಗೆ ಕಾಣುತ್ತಿದ್ದಿ ನೆನಪಿಲ್ಲ

ಕಣ್ಮುಚ್ಚಿ ಕುಳಿತು ಅಂದಿನ ಎಲ್ಲ ಚಿತ್ರಗಳನ್ನು ಕೆದಕಿದರೂ
ನಿನ್ನ ಮೊಗ ನೆನಪಿಗೆ ಬರುತ್ತಿಲ್ಲ
ನಿನ್ನ ಅಪ್ಪುಗೆ, ನಿನ್ನ ಸಾಂತ್ವನ, ಕೊಲ್ಮಿಂಚಿನಂತ ನಗೆ
ಬೆಚ್ಚನೆಯ ಮಾತು ಎಲ್ಲ ಕಣ್ಮುಂದೆ ರಿಂಗಣಿಸುತ್ತದೆ

ಆದರೆ
ನೆನಪಾಗುತ್ತಿಲ್ಲ ನಿನ್ನ ಮೊಗ
ಮನಸೊಳಗೆ ಮೂಡಲಾರದ ಚಿತ್ರ
ನಿನ್ನ ಮುಖ ನನಗೆ ವಿಚಿತ್ರ
ಭೌತಿಕ ಆಕಾರಗಳೆಲ್ಲ ಮರೆತು ಹೋದಾಗ
ನೆನಪುಳಿದದ್ದು ಆಕಾರವಿಲ್ಲದ ನಿನ್ನ ಪ್ರೀತಿಯೊಂದೆ ...

Thursday, November 29, 2007

ನೆನಪು ಮತ್ತು ಅವಳು


ದಿನ ಮುಗಿಯಿತು ಮತ್ತೆ ರಾತ್ರಿ ಬಂದಿದೆ

ಅದೇ ಒಂಟಿತನ ಮುಗಿಬಿದ್ದಿದೆ...

ಆಕಾಶ ನೋಡಿದೆ ಚಂದ್ರನಿದ್ದ ...

ನಿನ್ನ ನೆನಪು ನುಗ್ಗಿ ಬಂತು



....................



ಯಾವತ್ತೂ ನನ್ನ ಜೊತೆಯಾಗಿ ಅವಳು ಬರಲಿಲ್ಲ

ನನ್ನ ಕಡೆಗಣಿಸಿಯೇ ಮುನ್ನಡೆದಳು

ನಾನು ಸತ್ತಾಗ ಅವಳು ಬಂದರೆ ದಯವಿಟ್ಟು ಹೇಳಿಬಿಡು...

ಈಗಷ್ಟೇ ಮಲಗಿದ್ದೇನೆ ಅವಳ ನೆನೆ ನೆನೆದು...



...................



ಈ ಭೂಮಿ ಮೇಲಿನ ಎಲ್ಲ ನಗು ನಿಮ್ಮಲ್ಲಿದೆ

ಈ ಭೂಮಿ ಭಾನು ನಿಮ್ಮದಾಗಿದೆ

ಅದ್ಯಾಕೆ ಸುಮ್ಮನೆ ದು:ಖವನ್ನು ಮೇಲೆಳೆದುಕೊಳ್ಳುತ್ತೀರಿ ?

ನಿಮ್ಮ ಪ್ರತಿ ನೆನಪು ನನ್ನಲ್ಲಿದೆ...


ಸೂಚನೆ: ಕೆಲವು ಅನುವಾದಗಳು


Tuesday, October 30, 2007

ನಿನ್ನ ಪುಟ್ಟ ಪಾದಗಳು...




ನಿನ್ನ ಮೊಗಕ್ಕಿಂತ ನಾನು ನಿನ್ನ
ಪಾದಗಳನ್ನು ಹೆಚ್ಚಾಗಿ ಪ್ರೀತಿಸುತ್ತೇನೆ !
ಸಂತಸದಿಂದ ುಬ್ಬಿನಿಂತ ನಿನ್ನ
ದೃಢವಾದ ಪಾದಗಳನ್ನು ಪ್ರೀತಿಸುತ್ತೇನೆ ...

ಅವೊಂದೆ ನಿನ್ನ ಜೊತೆಗಿದ್ದದ್ದು
ನಿನ್ನ ಸುಂದರ ದೇಹ ಅವುಗಳ ಮೇಲಲ್ಲವೇ ನಿಂತದ್ದು
ನಿನ್ನ ಬಳುಕಾಡುವ ಸೊಂಟ
ನಿನ್ನ ತುಳುಕಾಡುವ ಮೊಲೆ
ಗುಲಾಬಿ ಮೊಲೆ ತೊಟ್ಟು
ಹತ್ತಿ ಹಗುರದ ನಿನ್ನ ಕಣ್ಣೆವೆ..
ಸಿಹಿಯಾದ ನಿನ್ನ ಕೆಂದುಟಿ
ಕಡುಗಪ್ಪು ಮುಂಗುರುಳು
ಬುಜದ ಮೇಲಿನ ನನ್ನ ಮೊಗ
ಅವಕ್ಕೆಲ್ಲ ಆದಾರ ನಿನ್ನ ಪಾದಗಳೇ ಅಲ್ಲವೆ ?

ಎಲ್ಲಕ್ಕಿಂತ ಹೆಚ್ಚಾಗಿ ನಿನ್ನ ಪಾದಗಳನ್ನು
ನಾನು ಪ್ರೀತಿಸುವುದು ಏಕೆ ಗೊತ್ತಾ ?
ನೀರು ನೆಲ ಗಾಳಿ ಎಲ್ಲ ಎದುರಿಸಿ
ನನ್ನ ಹುಡುಕಿ ಬಂದದ್ದು ನಿನ್ನ ಈ ಪುಟ್ಟ ಪಾದಗಳೇ ಅಲ್ಲವೆ !



ಸೂಚನೆ : ಪಾಬ್ಲೊ ನೆರೂಡಾ ಅವರ ಕವನವೊಂದರ ಸ್ಪೂರ್ತಿಯಿಂದ ರಚನೆಯಾದದ್ದು. ಭಾವಾನುವಾದ ಎಂದರೂ ತಪ್ಪಿಲ್ಲ.


Saturday, October 27, 2007


Photography is my passion.....
Some Photos which I clikcked in Halebidu ....


Tuesday, October 23, 2007

?





ಮಾತು ಮರೆತಂತಿದ್ದಳು

ಈಗ ಮಾತಾಗಿದ್ದಾಳೆ

ಪ್ರೀತಿ ತೊರೆದಂತಿದ್ದಳು

ಈಗ ನಗುತ್ತಿದ್ದಾಳೆ....



ನಕ್ಕರೇ ಮತ್ತೆಲ್ಲಿ

ಪ್ರೀತಿ ಉದಿಸುವುದೋ

ಮಾತು ಮತ್ತೆಲ್ಲಿ ಪ್ರೀತಿ ಕಡೆ ಹೊರಳುವುದೋ

ಭಯ ಅವಳಿಗೆ ಪ್ರೀತಿ ಮತ್ತೆ ಬದುಕುವ ಅನಿವಾರ್ಯತೆ ತಂದೊಡ್ಡಿದರೆ ?

ಬದುಕು ಸಾಕಾಗಿದೆ ....

Monday, October 22, 2007


ಕನಸಿನ ಬೇಲೂರಿನಲ್ಲಿ ನಾನು......

Tuesday, October 16, 2007

ಇವಳ ಪಡೆದ ಹೃದಯ ಧನ್ಯವು...


ಅವಳ ಕಣ್ಣು ಕಡಲ ತರಹ

ಅವಳ ಮನಸು ಮುಗಿಲ ತರಹ

ಅವಳೇ ಬಾಳ ಭಾವ ಬದುಕು



ನಕ್ಕರವಳು ಸುರಿವ ಮುತ್ತು

ಮನಸಲೆಲ್ಲ ಪ್ರೀತಿ ಮತ್ತು

ಬದುಕು ಹರುಷ ಸಿರಿಯು



ಅವಳು ಮುನಿದ ಕ್ಷಣವ ಕಾಣೆ

ಅವಳು ಅತ್ತ ದಿನವ ಕಾಣೆ

ಅವಳೇ ನನಗೇ ಸ್ಪೂರ್ತಿಯು



ಮಗುವ ಮನಸ ಹುಡುಗಿ ಅವಳು

ತಾಯ ಹೃದಯ ಮಮತೆ ಮಡಿಲು

ಇವಳ ಪ್ರೀತಿ ಧಾರೆ ಪಡೆದ ಹೃದಯ ಧನ್ಯವೂ...

Thursday, October 4, 2007

ನೀನು ನನ್ನ ಮರೆತರೆ........


ನೀನೊಂದು ವಿಷಯ ತಿಳಿದಿರಲೇಬೇಕು..

ನಿನಗೊತ್ತಾ...?

ನನ್ನ ಕೋಣೆಯ ಹೊರಗಿನ ಪೂರ್ಣ ಚಂದ್ರ

ಹಾಗೂ ಆಗಷ್ಟೇ ಶಿಶಿರ ಚುಂಬಿಸಿದ ಬೋಳು ಟೊಂಗೆ

ಬೂದಿ ಮುಚ್ಚಿದ ಒಲೆಯೊಳಗಿನ ಕೆಂಡ,

ಅಥವಾ ನೆರಿಗೆ ಬಿದ್ದಿರುವ ಒಣ ಕಟ್ಟಿಗೆ

ಸುವಾಸನೆ, ಬೆಳಕು, ಭೂಮಿಯೊಳಗಿನ ಎಲ್ಲ

ಎಲ್ಲವೂ ನನಗಾಗಿ ಕಾಯುತ್ತಿರುವ ನಿನ್ನ ನೆನಪಿನ ದ್ವೀಪಕ್ಕೆ

ನನ್ನ ಕೊಂಡೊಯ್ಯುವ ದೋಣಿಯಂತೆ ಎನಿಸುತ್ತದೆ.



ಹಾಗೆಯೇ...



ನೀನು ನನ್ನ ಚೂರು ಚೂರೆ ಪ್ರೀತಿಸುವುದ ಮರೆತೆ ಅಂತಿಟ್ಟುಕೋ

ನಾನು ನಿನ್ನ ಚೂರು ಚೂರೆ ಮರೆಯುತ್ತೇನೆ.

ಒಮ್ಮೆಲೆ ನೀ ನನ್ನ ಮರೆತರೆ

ನನ್ನತ್ತ ನೋಡಬೇಡ

ನೀ ಮರೆತ ಕ್ಷಣದಲ್ಲೇ ನಾನೂ ನಿನ್ನ ಮರೆತಿರುತ್ತೇನೆ...



ಇದು ದೀರ್ಘ ಮತ್ತು ಹುಚ್ಚುತನ ಅಂತ ನೀನು ತಿಳಿದು

ನಿನ್ನ ಪ್ರೀತಿಯ ಬೇರುಗಳು ಹುಗಿದಿರುವ ಹೃದಯದ ತೀರದಲ್ಲಿ

ನನ್ನ ಬಿಟ್ಟು ಹೊರಡಲು ನೀನು ನಿರ್ಧರಿಸಿದೆ ಅಂತಿಟ್ಟುಕೋ

ಆ ತಾಸಿನ ಆ ಕ್ಷಣದಲ್ಲಿಯೇ ನನ್ನ ಪ್ರೀತಿಯ ಬೇರುಗಳು

ಬುಡದಿಂದೆದ್ದು ಬೇರೆ ಭೂಮಿಯನ್ನು ಹುಡುಕಿಕೊಳ್ಳಲು ಹವಣಿಸುತ್ತವೆ...



ಆದರೆ ಪ್ರತಿದಿನ ಪ್ರತಿ ಕ್ಷಣ

ನೀನು ನನಗಾಗಿಯೇ ಹುಟ್ಟಿದವಳು ಎಂದು ನೀನೆಣಿಸಿದರೆ

ನನ್ನ ನೆನಪಿನಲ್ಲಿ ಪ್ರತಿದಿನ ಹೂವೊಂದು ನಿನ್ನ ಮುಡಿಗೇರಿದರೆ...



ಓಹ್ ನನ್ನವಳೇ , ಓಹ್ ನನ್ನ ಒಲವೇ...

ನನ್ನಲ್ಲಿ ಆ ಎಲ್ಲ ಪ್ರೀತಿಯ ಬೆಂಕಿ ಪುನರುದಿಸುತ್ತದೆ

ನನ್ನಲ್ಲಿ ಯಾವೂದು ಸತ್ತಿಲ್ಲ ಯಾವುದೂ ಹುಟ್ಟಿಲ್ಲ...

ನನ್ನ ಪ್ರೀತಿ ನಿನ್ನ ಪ್ರೀತಿಯಿಂದಲೇ ಬದುಕುತ್ತೆ

ಎಲ್ಲಿಯವರೆಗೆ ನೀ ಉಸಿರಾಡುತ್ತೀಯೋ

ಅಲ್ಲಿಯವರೆಗೆ ನಿನ್ನ ತೋಳಲ್ಲಿರುತ್ತದೆ ನನ್ನನ್ನೂ ಕೂಡಾ ಬಿಡದೆ...




ಸೂಚನೆ: ಖ್ಯಾತ ಕವಿ ನೆರೂಡ ಅವರ ಕವಿತೆಯೊಂದರ ಅನುವಾದ ಅನ್ನೊದಕ್ಕಿಂತ ಭಾವಾನುವಾದ.

Tuesday, September 25, 2007

ಮೊನ್ನೆ ಭಾನುವಾರ ಕನ್ನಡ ಪ್ರಭದಲ್ಲಿ ನಾನು ಬರೆದಿರೋ ಕಥೆ ಪ್ರಕಟವಾಗಿದೆ. ಇಲ್ಲಿದೆ ನೋಡಿ ಲಿಂಕ್. ಓದಿ ಅಭಿಪ್ರಾಯ ತಿಳಿಸಿದರೆ ನಾನು ಖುಷ್.....

http://www.kannadaprabha.com/NewsItems.asp?ID=KP420070922031856&Title=Sapthahikaprabha&lTitle=%D1%DB%AE%DB%A1%D5O%DA%AE%DA%C3%BA%DA&Topic=0&Dist=0

Monday, September 17, 2007

ಮುಚ್ಚಿಟ್ಟ ಭಾವನೆಗಳು


ಹರಿವ ನದಿಗುಂಟ ಹಾಳೆ ದೋಣಿ

ಕೂಡಿಟ್ಟ ಭಾವನೆಗಳ ಪಯಣ

ಮಳೆಗಾಲ ಬಿಸಿಲಲ್ಲಿ ಬಾಗಿದ ಕಾಮನ ಬಿಲ್ಲು

ಕೂಡಿಟ್ಟ ಭಾವನೆಗಳದೇ ಬಣ್ಣ ..



ಹುಡುಗಿ ಸೊಂಟದ ಮೇಲೆ ಕುಳಿತ ಬಿಂದಿಗೆ

ತುಂಬ ಕೂಡಿಟ್ಟ ಭಾವನೆಗಳದೇ ತಾಕಲಾಟ

ತೊಡೆಯೇರಿ ಕುಳಿತ ವೀಣೆ ತಂತಿಯಲೆಲ್ಲ

ಅವುಗಳದೇ ಸ್ವರ ತಿಲ್ಲಾನ...



ಎದೆ ಬಿಚ್ಚಿ ನಡೆವಾಗ ಕಣ್ಮುಚ್ಚಿ ಅಳುವಾಗ

ಕಾಲಿಗೆಡರುವ ಸೀರೆ ನೆರಿಗೆಯಲೆಲ್ಲ ಭಾವನೆಗಳು

ಮಡಚಿಬಿದ್ದ ಮುದಿ ಚರ್ಮದ ನೆರಿಗೆಯಲೆಲ್ಲ

ಮುಚ್ಚಿಟ್ಟ ಭಾವನೆಗಳು....

Tuesday, September 11, 2007

ಕಣ್ಮುಚ್ಚಿದಾಗ ಕಂಡಿದ್ದು.....( ಅನುವಾದ)




ನೆನಪು ನಕ್ಷತ್ರಗಳ ದಿಟ್ಟಿಸುತ್ತ ಕಣ್ಮುಚ್ಚಿದಂತೆ

ಮುಳುಗಿದೆ ಮುಗಿಯದ ಹಾಡಿನಲ್ಲಿ

ಪ್ರತಿಕ್ಷಣ ನಿಚ್ಛಳ ಕಳೆದು ಹೋದವು ದಿನವೂ ಹೊಸತಂತೆ

ನೋವು ನಲಿವುಗಳ ನರ್ತನದ ಬಿಂಬ ಕಣ್ಣಿನಲ್ಲಿ.


ನೋವು ಅನುಭವಕ್ಕಿದೆ ಚುಚ್ಚಿದ ಮುಳ್ಳು ಕಾಣುತ್ತಿಲ್ಲ

ಹುಚ್ಚೆದ್ದು ಬೀಸಿದ ಭೂತದ ಬಿರುಗಾಳಿಗೆ

ಉಳಿದದ್ದು ಪಳೆಯುಳಿಕೆ ಆತ್ಮವಲ್ಲದೆ ಮತ್ತೇನಿಲ್ಲ

ನೆನಪ ಪ್ರತಿಧ್ವನಿ ನನ್ನನ್ನೀಗ ಕವಿಯಾಗಿಸಿದೆ.


ಬಹಳ ಹಿಂದೆ ತುಳಿದ ಹಾದಿ ದಿಟ್ಟಿಸುತ್ತೇನೆ

ಹುಡುಕುತ್ತೇನೆ ಹತ್ತಿಳಿದ ಮೆಟ್ಟಿಲು ಮತ್ತುಳಿದ ಸಂತಸ

ಸುಳಿದಾಡುವ ಕಳೆದು ಹೋದ ಹುಗಿದಿಟ್ಟ ನೆನಪ ಸುವಾಸನೆ

ತನ್ನೊಳಗೆ ಉಳಿದಿದೆ ಸಮಾಧಿಯಾಗಿ ಪಳೆಯುಳಿಕೆಯಂತೆ..


ದಿಟ್ಟಿಸುತ್ತೇನೆ ನೋವು ನಲಿವುಗಳ

ನೋವು ಮರೆತು ನಡೆದ ದಿನಗಳ

ಹೆದರಿಕೆಯ ಗುಮ್ಮ ಕಳೆದು ಈಗುಳಿದದ್ದು

ಬರಡ ಮಳೆಯಲ್ಲಿ ತೇಲುತ್ತಿರುವ ಹೃದಯ ಮಾತ್ರ


ದಿಟ್ಟಿಸಿದರೆ ನಾ ಕಳೆದು ಹೋಗಿದ್ದೇನೆ

ಶೂನ್ಯ ಸುತ್ತ ಮುತ್ತ

ನನ್ನೊಳಗೆ ಕಂಡೆ ಮುನ್ನಡೆಸಿದವನ

ನಾ ಕಳೆದು ಹೋಗುವವರೆಗೆ ನನ್ನ ಬೆಂಬಲಿಸಿದವನ


ದಿಟ್ಟಿಸಿದೆ ನಾ ನಡೆದ ಹಾದಿ ಕಾಣಿಸಿತು

ಬೆಂಬಲಿಗನಿಗೆ ನನ್ನ ಹಾದಿಗೆ ಸಂಬಂಧವೇ ಇಲ್ಲ

ನಾ ಬಿದ್ದಾಗ ಅವ ಬೆಳೆದ ನಾ ಬಗ್ಗಿದಾಗ ಅವ ನಿಂತ

ಸುತ್ತ ನೋಡಿದೆ ತೆರೆಗಳು

ಕಣ್ತೆರೆದರೆ ಕಣ್ತೀರುವವರೆಗೂ ಶರಧಿ


ಏರಿ ಬೀಳುವ ತೆರೆಯಲ್ಲಿ

ನನಗೆ ಕಂಡಿದ್ದು ಸಂತಸ, ದು:ಖ ಮಾತ್ರ

ನನ್ನೆದೆಯ ಉಧ್ವೇಗ ಮಡಚಿಟ್ಟಾಗ ಕಂಡಿದ್ದು

ತೆರೆ ಎದ್ದೆದ್ದು ಬಿದ್ದು ಮಾಯವಾದರೂ ಉಳಿದ ವಿಶಾಲ ಶರಧಿ...



Looking at


Looking atlooking at the stars closing my eyes

and drifting long the melody

everything reminiscent.. days bygone as a novice

looking at the life around and its frantic parady



I felt the sting, of no thorn

gale of the past, blowing too hard

left now is the vestige of a soul battered and worn

echoes of past turning me into a bard


looking at the path, treaded long before

searching for the steps and the frolic

reticent fragrance that lingers but lasts no more

buried deep within and exists as a relic


looking at the smile and cheers

laying the way ahead unknown of pains

now that's left is a phantom of fears

and a droughted heart in a desert of rains


looking all around I found myself lost

everything there yet void of glare

deep within I found a host

that led me in past and long as I last


looking around I found the path

everything I lost was not a part of my host

it grew when I fell and stood when I knelt

looking around I saw the tide

opened my eyes found the ocean far and wide


with each mellowing wave and falling tide

I could see only the joy or the pain

what I saw when I unpacked my emotion

though the tide recedes but there shall always stay the ocean


Written By : Pavani Thota

Saturday, September 8, 2007

ಹುಡುಕುತ್ತೇನೆ....








ಅವಳಿರುವವರೆಗೆ ನನ್ನೆದೆಯಲ್ಲಿ

ಕಾಮ ಇರಲಿಲ್ಲ...

ಮೈಗೆ ಮೈ ಹಚ್ಚಿ ಬೆಚ್ಚಗೆ ಕುಳಿತಾಗ

ಅವಳ ಅಂಗೈಯಲ್ಲಿ ನನ್ನ ಕೈ ಬೆಸೆದಾಗ...

ಅವಳೆದೆಯ ಮಿದುವಲ್ಲಿ ಕಣ್ಣ್ ಮುಚ್ಚಿದಾಗ

ನನ್ನೆದೆಯಲ್ಲಿ ಕಾಮ ಇರಲಿಲ್ಲ...



ಅವಳದರಕ್ಕೆ ಅದರ ಸೇರಿದಾಗಲೂ

ಅವಳಪ್ಪಿ ನಲಿದಾಗಲೂ

ಅವಳ ಮೊಗ ಕಣ್ಣು ದಿಟ್ಟಿಸಿದಾಗಲೂ

ಅವಳ ನಗುವಿಗೆ ಅವಳಳುವಿಗೆ

ನಾನಾದಾಗ ನನ್ನಲ್ಲಿ ಕಾಮ ಇರಲಿಲ್ಲ....



ದಿನವಿಡೀ ಮಾತು ನಗು

ಕ್ಷಣ ಕ್ಷಣವೂ ಕನಸು

ಕನಸ ಮಗುವಿಗೆ ಹೆಸರಿಡುವಾಗಲೂ

ನನ್ನೆದೆಯಲ್ಲಿ ಕಾಮ ಇರಲಿಲ್ಲ...



ಈಗ ಅವಳಿಲ್ಲ ....



ಇನ್ಯಾರದೋ ಎದೆಯ ಮಿದುವಲ್ಲಿ

ಕಾಮ ಹೆಡೆಯಾಡುತ್ತೆ..!

ಇನ್ಯಾರದೋ ಅಂಗೈ ನನ್ನಂಗೈ ಬೆಸೆದಾಗ

ಮೊಗ ಕಣ್ಣು ದಿಟ್ಟಿಸಿದಾಗ

ಮನಸು ಕನಲುತ್ತೆ...

ನನ್ನೆದೆಯ ಕಾಮ ಕಂಡು ನಾನು ಮರಗುತ್ತೇನೆ

ಅವಳಿಗಾಗಿ ಹುಡುಕುತ್ತೇನೆ

ಅವಳಿರುವಾಗ ನನ್ನೆದೆಯಲ್ಲಿ
ಕಾಮ ಇರಲಿಲ್ಲ...

Monday, August 27, 2007

ವಿಧವೆ ಹಕ್ಕಿಯ ಪ್ರೀತಿ

ತನ್ನ ಪ್ರೀತಿಗಾಗಿ ವಿಧವೆ ಹಕ್ಕಿ ದು:ಖಿಸುತ್ತಿದೆ
ಶಿಶಿರ ಬಡಿದ ಟೊಂಗೆಯಲ್ಲಿ ಕುಳಿತು;

ಮೇಲೆ ತಣ್ಣಗೆ ತಾಕುವ ಹಿಮಗಟ್ಟಿದ ಕುಳಿರ್ಗಾಳಿ

ಹೆಪ್ಪುಗಟ್ಟಿದ ನೀರು ಕೆಳಗೆ.

ಎಲೆಗಳೇ ಇಲ್ಲದ ನಗ್ನ ಕಾಡು,

ಹೂಗಳೆ ಇಲ್ಲದ ಭೂಮಿ,
ಹರಿದಾಟ ಮರೆತ ಗಾಳಿ

ಅಲ್ಲೆಲ್ಲೋ ತಿರುಗುವ ಗಿರಣಿಯೊಂದನ್ನು ಬಿಟ್ಟು

ಎಲ್ಲ ನಿಂತಂತಿದೆ...






ಸೂಚನೆ: ಶೆಲ್ಲಿಯ ಈ ಕವನ ಕಂಡಾಗ ಯಾಕೋ ಮತ್ತೆ ಮತ್ತೆ ಓದಿಕೊಂಡೆ. ಅನುವಾದ ಮಾಡುವ ಮನಸಾಯ್ತು.. ಆದ್ರೆ ನಾನು ಸೋತೆ... ಕೆಳಗಡೆ ಇರುವುದು ಮೂಲ ಕವನ.

Poem By P.B.Shelly

A widow bird sate mourning for her Love

Upon a wintry bough;

The frozen wind crept on above,

The freezing stream below.

There was no leaf upon the forest bare,

No flower upon the ground,

And little motion in the air

Except the mill-wheel's sound.

Wednesday, August 1, 2007

ಸಿಗರೇಟು.


ಸುರುಳಿ ಸುತ್ತುವ ಸಿಗರೇಟು ಹೊಗೆಯಲ್ಲಿ

ಸುಳಿದಾಡುವ ನಿನ್ನ ನೆನಪು

ಸುಡುವ ಹೃದಯಕ್ಕೆ ರೂಪಕ..



ತುದಿಯಲ್ಲಿ ತೂಗಾಡುವ ಬೂದಿ

ಉದುರಿಬಿಳಲಿರುವ ಜೀವದ ಪ್ರತೀಕ

ಬೂದಿಯಡಿಯ ಬೆಂಕಿ

ಮನಸು ಹೊತ್ತ ಕನಸು...

Monday, July 30, 2007

ನಿಜದ ಹುಡುಕಾಟ


ಅಕ್ಷರಗಳ ಬಡಿದಾಟದಲ್ಲಿ ಭಾವನೆಗಳಿಗೆಲ್ಲ

ಗೊಸುಂಬೆಯ ಸೋಂಕು..

ಸಂಬಂಧಗಳ ಹೆಸರಿನಾಟದಲ್ಲಿ

ಮಾನವೀಯತೆಗೆ ಮಂಕು..

ಮಾತನಾಡುವ ಬರದಲ್ಲಿ

ಮೌನದರ್ಥಕ್ಕೆ ನಿಘಂಟು....

ನಿ..ರೀಕ್ಷೆ...?


ನಿರೀಕ್ಷೆಗಳೇ ಇಲ್ಲದ ಬದುಕು

ಏಕೆ ಗೊತ್ತಾ ...?

ಪ್ರೀತಿ ಮರೆತು ಹೋದ ನೀನು

ತಿರುಗಿ ಬರಲಾರೆ...!

ನಿನ್ನ ನಿರೀಕ್ಷೆ ಬಿಟ್ಟು ಬೇರೆ ಏನಿತ್ತು ಹೇಳು

ನನ್ನ ಬದುಕಿನಲ್ಲಿ...?

Tuesday, July 17, 2007

ಕೆಲವು ಅನುವಾದಗಳು


ಸುಂದರ ಸಂಜೆಯಿತ್ತು

ಬೀಸುವ ಗಾಳಿಯಲ್ಲಿ ತಂಪಿತ್ತು

ಕಣ್ಣೀರ ನದೀ ಈಗಷ್ಟೇ ತಟಸ್ಥವಾಗಿತ್ತು

ಬೇಟಿಗೆ ನನ್ನ ಮನಸ್ಸು ಕೂಡಾ ಕಾದಿತ್ತು...

ಆದರೆ ಅವಳಲ್ಲಿ ಸಮಯ

ನನ್ನಲ್ಲಿ ಉಸಿರು ಇಲ್ಲವಾಗಿತ್ತು...



...................................



ಈ ಜೀವನದ ಹಾದಿ ವಿಚಿತ್ರ

ಅಪರಿಚಿತರು ಮಿತ್ರರಾಗುತ್ತಾರೆ

ಮಿಲನದ ಖುಷಿ ಕೊಡಲಿ ಬಿಡಲಿ

ಬೇರೆಯಾಗುವ ದು:ಖವನ್ನಂತೂ

ಮರೆಯದೇ ಕೊಡುತ್ತಾರೆ...



........................................



ಅವಳು ಯಾವತ್ತೂ ನನ್ನ ಜೊತೆಯಾಗಿ ಬರಲಿಲ್ಲ

ನನ್ನ ಕಡೆಗಣಿಸಿಯೇ ಮುನ್ನಡೆದಳು

ನಾನು ಸತ್ತಾಗ ಅವಳು ಬಂದರೆ

ದಯವಿಟ್ಟು ಹೇಳಿಬಿಡು

ಈಗಷ್ಟೇ ಮಲಗಿದ್ದೇನೆ ಅವಳ ನೆನಪಲ್ಲಿ...

....................................................................



ಕಣ್ಣು ನಿನ್ನ ನೋಡಲು ಆಸೆ ಪಟ್ಟರೆ

ಕಣ್ಣುಗಳದ್ದೇನು ತಪ್ಪು..?

ಪ್ರತಿ ಉಸಿರಲ್ಲೂ ನಿನ್ನದೇ ನೆನಪಿದ್ದರೆ

ಉಸಿರಿನದ್ದೇನು ತಪ್ಪು ?

ಅಂದಹಾಗೆ ಕನಸುಗಳು ಹೇಳಿ ಬರುವುದಿಲ್ಲವಲ್ಲಾ...

ನಿದ್ದೆಯಲ್ಲೆಲ್ಲಾ ನಿನ್ನದೇ ಕನಸಿದ್ದರೆ

ರಾತ್ರಿಯದ್ದೇನು ತಪ್ಪು..?

..................................................................



ನಾನು ಎಲ್ಲರನ್ನೂ ನೋಡಿ ನಗುತ್ತೇನೆ ಎಂಬುದು

ಅವಳ ಅಪವಾದ...

ಮುಗ್ದೆ ಅವಳು

ಅವಳಿಗೇನು ಗೊತ್ತು..!

ಎಲ್ಲರ ಮೊಗದಲ್ಲೂ ನನಗೆ

ಅವಳೇ ಕಾಣುತ್ತಾಳೆ ಎಂದು...

Monday, July 9, 2007

ಕವನ


ಹೆಣ ಸುಟ್ಟ ಬಳಿಕ ಸುಳಿದಾಡುವ ಹೊಗೆ

ಗಿಡ ಸತ್ತ ಬಳಿಕ ಮೇಲೆದ್ದು ನಗುವ ಒಣ ಬೇರು

ಸತ್ತ ಪ್ರೀತಿಗೊಂದು ಗೋರಿ....

ಮುಂಗಾರು ಮಳೆ - ಯೋಗರಾಜ್ ಭಟ್ರು..


ಭಾನುವಾರ ಸಂಜೆ, ಗೆಳೆಯನಿಂದ ದೂರವಾಣಿ ಕರೆ, ಮುಂಗಾರು ಮಳೆ ರಜತಮಹೋತ್ಸವ ಕಾರ್ಯಕ್ರಮ ಇದೆ, ಮುಂಬಾಗದಲ್ಲೇ ಕೂರಬಹುದು, ಪ್ರೆಸ್ ಗ್ಯಾಲರಿಯಲ್ಲಿ , ತಕ್ಷಣ ಹೊರಟು ಬಾ......

ಅದ್ಯಾಕೋ.. ಹೊರಟೆ.. ಪ್ಯಾಲೇಸ್ ಗ್ರೌಂಡ್ ಎಂಬೋ ಗ್ರೌಂಡ್ನ ಬಳ್ಳಾರಿ ಎಂಟ್ರೆನ್ಸ ತುಂಬ ಜನಗಳ ಮಳೆ... ನಾವೇ ಮುಂದು ಅಂದ್ರೆ ನಮಗಿಂತ ಮುಂದು ಅಂತ ಜನ ನೂಕು ನುಗ್ಗಾಡ್ತಿದ್ರು... ಎಲ್ನೋಡಿದ್ರೂ ಕಾರು... ಏಲ್ನೋಡಿದ್ರೂ ಕಾಲು.. ಯಾರದ್ದೋ ಮುಖದ ಮುಂದೇ ನಮ್ಮ ಮುಖ... ಯಾರದೋ ಕಾಲ ಮೇಲೆ ನಮ್ಮ ಕಾಲು... ಮುಂಗಾರು ಮಳೆ...


ಚಿತ್ರಶ್ರೀ ಮಾತು... ಮದ್ಯೇ ಹಿರಿಯ ಪತ್ರಕರ್ತ ಮೂರ್ತಿಯ ಮಾತು... ಗಣೇಶ, ಅಪ್ಪು, ಶಿವಣ್ಣ, ರಾಘವೇಂದ್ರ ರಾಜಕುಮಾರ್ ,ಸಂಜನಾ ಗಾಂಧಿ, ನಾನು ಗಮನಿಸಿದ್ದು ಇದನಲ್ಲ... ನನ್ನ ಗಮನ ಇದ್ದದ್ದು.. ಮುಂಗಾರು ಮಳೆಯ ನಿರ್ದೇಶಕ ಯೋಗರಾಜ್ ಭಟ್ ಅವರ ಮೇಲೆ. ವೇದಿಕೆಯ ಮೇಲೆ ಗಣ್ಯರ ದಂಡೇ ನೆರೆದಿದ್ದಾಗ ಯೋಗರಾಜರು ಎಲ್ಲಿದ್ರು..?


ಗಣ್ಯರ ದಂಡೇ ನೆರೆದಿದ್ದ ಸಂದರ್ಬದಲ್ಲಿ ಯೋಗರಾಜರು ಹಿಂದೆ ಕುಳಿತು ನಗ್ತಾ ಇದ್ರು .... ಪ್ರೀತಮ್ ಗುಬ್ಬಿ ಅವ್ರ ಕಾಲ್ಮೇಲೆ ಕುಳಿತಿದ್ದ... ಅಂತಾ ರಶ್ ಅಲ್ಲೂ ಅವರು ಏಕಾಂತವನ್ನ ಅನುಭವಿಸುತ್ತಿದ್ರು. ಕಾರ್ಯಕ್ರಮ ನಿರ್ವಾಹಕರು ವೇದಿಕೆ ತೆರವಿಗೆ ಮನವಿಮಾಡಿಕೊಂಡಾಗ... ಯೋಗರಾಜರು ಮೆಲ್ಲನೆ ಜಾರಿದ್ರು... ನಾನು ಅವರನ್ನೇ ಗಮನಿಸುತ್ತಿದ್ದೆ. ಅವರ ಮೊಗದಲ್ಲಿ ಉದ್ವೇಗವಾಗಲಿ .. ಖುಷಿಯಾಗಲೀ ಕಂಡು ಬರಲಿಲ್ಲ.. ನಿರಾಳವಾಗಿದ್ದರು.


ಜನರನ್ನು ಹುಚ್ಚೆಬ್ಬಿಸಿ ತಣ್ಣಗೇ ಕುಳಿತಿದ್ದರು..... ಅದ್ಭುತ ಕಲಾಕೄತಿ ನೀಡಿ ಏನು ಗೊತ್ತಿಲ್ಲದವರಂತೇ ಕುಳಿತಿದ್ದರು... ಅವರ ನಿರಾಳತೆ ಇಷ್ಟವಾಯ್ತು...


ವೇದಿಕೆಯಿಂದ ತಣ್ಣಗೆ ಜಾರಿಕೊಂಡ ಯೋಗರಾಜರನ್ನ ನಾನು ಹುಡುಕಿ ಹೊರಟೆ... ನನಗೆ ಅನಿಸಿತ್ತು ಅವ್ರಿಗೆ ಈ ಜಂಗುಳಿ ಸಾಕಾಗಿದೆ ಅಂತ... ಹುಡುಕಿ ಹೊರಟವನಿಗೆ ಕಂಡರು... ಸಾಮಾನ್ಯರಲ್ಲಿ ಸಾಮಾನ್ಯರಾಗಿ ಸುಮ್ಮನೇ ನಿಂತಿದ್ದರು... ಅವರ ಹತ್ತಿರ ಹೋಗಿ ನಿಂತೆ ಯಾಕೋ ಮಾತಾಡ್ಲಿಕ್ಕೆ ಧೈರ್ಯಾನೇ ಬರಲಿಲ್ಲ...


ಹಲವು ವರ್ಷಗಳ ಸೋಲಿನ ನಂತರ ಸಿಕ್ಕ ಗೆಲುವು ಅವರಲ್ಲಿ ಯಾವುದೇ ಕೊಂಬು ಮೂಡಿಸಿರಲಿಲ್ಲ.. ಸಾಮಾನ್ಯರಲ್ಲಿ ಸಾಮಾನ್ಯರಾಗಿದ್ದು ಅಸಮಾನ್ಯವಾದುದನ್ನು ಸಾಧಿಸುವ ಅವರ ಜೀವನ ವಿಧಾನ ಇಷ್ಟವಾಯ್ತು...


ಅವರು ಬರೆದ ಪುಸ್ತಕ "ಹಾಗೇ ಸುಮ್ಮನೇ " ಅವರ ಮುಂಗಾರು ಮಳೆ ಸಿನೆಮಾ ಗುಂಪಿನ "ಮೀಸೇ" ಅವರಿಂದ ಬಿಡುಗಡೆ ಮಾಡಿಸಿದರು...


ಗ್ರೇಟ್ ಯೋಗರಾಜ್....

Wednesday, June 20, 2007

’ಪಥೇರ್ ’ಕೆಲವು ಚಿತ್ರಗಳು

ಅದೋ ಓಡುತಿದೆ ರೈಲು ಕಶ್ ಹೂವುಗಳ ಹಿನ್ನೆಲೆಯಲ್ಲಿ
ದುರ್ಗಾ ಮೊಗದಲ್ಲೇನು ಮುಗ್ದ ಸೌಂದರ್ಯಾ..!

ಆಪು ಕಣ್ಣಲ್ಲಿ ಕಾಣುತ್ತಿರುವುದು ಭಯವೋ, ಕುತೂಹಲವೋ, ಕಾತರವೋ...?


ಪಥೇರ್ ಪಾಂಚಾಲಿ

ಅಪು ಮತ್ತು ದುರ್ಗಾ ರೇ ಕುಂಚದಲ್ಲಿ ಟ್ರೇನ್ ಕಂಡದ್ದು



ಈ ಸಿನೆಮಾದ ಪ್ರತಿ ಫ್ರೇಮ್ ಕೂಡ ಒಂದು ದೄಶ್ಯ ಕಾವ್ಯ. ಕಪ್ಪು ಬಿಳುಪು ಸಿನೆಮಾ ಕಟ್ಟಿಕೊಡುವ ಕಲ್ಪನೆಯ ಬಣ್ಣ ಅದ್ಭುತ. ಪ್ರತಿ ಫ್ರೇಮ್ಗೆ ಸತ್ಯ್ಜಜಿತ್ ರೇ ಅವರದು ಕುಂಚ ಕಲ್ಪನೆ, ನಂತರ ಅದಕ್ಕೆ ಮೂರ್ತ ರೂಪ. ಇತ್ತೀಚಿನ ದಿನಗಳಲ್ಲಿ ಈ ರೀತಿಯ ತಪಸ್ಸಿನ ಕೆಲಸ ಮಾಡುವವರು ಕಾಣುತ್ತಾರೆಯೆ..?
ಪಥೇರ್ ಸಿನೆಮಾದ ಒಂದು ದೄಶ್ಯ ಕೂಡ ಆಚಿಚೆಯಾದಂತಿಲ್ಲ. ಅನವಶ್ಯ ಎಂಬುದು ಇಲ್ಲಿ ಶೂನ್ಯ. ಗುಡಿಸಲ ಒಳ ಹೋಗುವ ಹಾವು, ಆಗಾಗ ಕೇಳಿ ಬರುವ ರೈಲ ಸದ್ದು, ಹುಲ್ಲುಗಾವಲಿನಲ್ಲಿ ರೈಲು ಹಾಯುವುದನ್ನು ಕಾಣುವ ಆಪು ಮತ್ತು ದುರ್ಗಾ, ನೆರಿಗೆ ಇಳಿಬಿದ್ದ ಹಣ್ಣಣ್ಣು ಮುದುಕಿ..... ಆಹ್ ಸಿನೆಮಾ ನೋಡಿ ಆನಂದಿಸಬೇಕು..
ರಾಯ್ ಬಣ್ಣದಲ್ಲಿ ಈ ಸಿನೆಮಾ ಮಾಡಿದ್ದರೆ ಇಷ್ಟೆಲ್ಲಾ ಮನಸಿಗೆ ತಾಕುತ್ತಿರಲಿಲ್ಲವೇನೋ...?




Thursday, June 14, 2007

ಕನಸು


ಸಾವಿಗೆ ಮುಂಚೆ ಕುಡಿಯೊಡೆದ ಜೀವದ ಆಸೆ


ಬುಡಮೇಲಾದ ಗಿಡದಲ್ಲಿ ಕುಡಿಯೊಡೆದ ಚಿಗುರು


Tuesday, May 29, 2007

ಕುಣಿತ

ಕಣ್ಣೆದುರಿನ ಕುಣಿತ ಕಣ್ಣಿಗೆ ಕಟ್ಟಿದಂತಿದೆ

ಟೈ ಸೂಟಿನೆದುರಿನ ಡೊಳ್ಳು ಕುಣಿತ

ಕರಗ ಹೊತ್ತವರ ಬೆವರ ಮಣಿತ...

ಹೊತ್ತವರ ಡೊಂಬರಾಟ

ಡೊಳ್ಳು ಹೊಟ್ಟೆಯ ಎದುರು...

ಮಳ್ಳು ನಗೆ ನಕ್ಕು ಒಂದೆರಡು ನಾಣ್ಯ ಎಸೆದು

ಮುಂದೆ ನಡೆದವರ ಧರ್ಪ

ಕಣ್ಣೆದುರಿನ ಕುಣಿತ ಕಣ್ಣಿಗೆ ಕಟ್ಟಿದಂತಿದೆ

ಮುಂದೆ ಹೋದವರ ಹಿಂದೆ ಹಿಂದೆ ಕುಣಿ ಕುಣಿದ ಮಂದೆ

ಹತ್ತಿರ ಬಂದರೆ ಮೂಗು ಮುಚ್ಚಿ ನಡೆದವರ ಹಿಂದೆ

ಕರಗ ಹೊತ್ತವರ ಮಣಿತ ಡೊಳ್ಳು ಹೊತ್ತವರ ಕುಣಿತ

ಬಿಳಿಕೋಟಿನೊಳಗಿನ ಕರಿಮನಸ ಮಂದಿ

ಕರಿಬಣ್ಣದೊಳಗಿನ ಬಿಳಿಮನಸ ಮಂದಿ

ಬಿಳಿಕೋಟ ಮುಂದೆ ಕರಿಬಣ್ಣದ ಮಂದೆ

ಟೈ ಸೂಟಿನೆದುರಿನ ಡೊಳ್ಳು ಕುಣಿತ
ಕರಗ ಹೊತ್ತವರ ಬೆವರ ಮಣಿತ...

ಕಣ್ಣೆದುರಿನ ಕುಣಿತ ಕಣ್ಣಿಗೆ ಕಟ್ಟಿದಂತಿದೆ

:ಬೆಂಗಳೂರಿನ ತಾಜ್ ಹೋಟೆಲ್ ಕಾರ್ಯಕ್ರಮದಲ್ಲಿ ಗಣ್ಯರನ್ನು ಸ್ವಾಗತಿಸುತ್ತಿದ್ದ ಕರಗ ಮತ್ತು ಡೊಳ್ಳು ಹೊತ್ತ ತಂಡವನ್ನು ಕಂಡಾಗ ಮೂಡಿದ್ದು...

ದೂರ ತೀರ ಯಾನ

ಹುಡುಕುವ ಹಂಬಲ ಯಾನಕ್ಕೆ ಪ್ರೇರಣೆ
ಹಂಬಲ ಮೊಳೆತಿದೆ ಯಾನ ಹೊರಟಿದೆ...
ಹಾದಿ ಬೀದಿಯ ಹಂಗಿಲ್ಲ ಮನಸ ಕನಸಿಗೆ...
ಬಣ್ಣಗಳೇ ಬೇಕಿಲ್ಲ ದೂರ ತೀರಕೆ...